ಸ್ಥಳೀಯ ಸುದ್ದಿ

2 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಶಾಸಕ ಅಮೃತ ದೇಸಾಯಿ ‌ಚಾಲನೆ

ಧಾರವಾಡ

ಧಾರವಾಡ ತಾಲೂಕಿನ ಬೇಲೂರ ಗ್ರಾಮದಲ್ಲಿ
ಲೋಕೋಪಯೋಗಿ ಇಲಾಖೆಯ 2021-22ನೇ ಸಾಲಿನ ಲೆಕ್ಕ ಶೀರ್ಷಿಕೆ 5054 ಅಪೆಂಡಿಕ್ಸ್-ಇ ಯೋಜನೆ ಅಡಿ ಅಂದಾಜು 2 ಕೋಟಿ ರೂಪಾಯಿ ವೆಚ್ಚದಲ್ಲಿ ಧಾರವಾಡ ತಾಲೂಕಿನ ಬೇಲೂರ ಎನ್.ಎಚ್ -4 ರಿಂದ ಬೇಲೂರು ಗ್ರಾಮದವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾರ್ಯಕ್ರಮಕ್ಕೆ ಧಾರವಾಡ ಶಾಸಕರಾದ ಅಮೃತ ದೇಸಾಯಿಯವರು ಸೋಮವಾರ ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ವೈಶಾಲಿ ಹುಲಂಬಿ, ಬಸವರಾಜ ಚಿಕ್ಕನ್ನವರ, ಶಿವರಾಜಕುಮಾರ ಕುರಿ, ಯಲ್ಲಪ್ಪ ಕಡ್ಲಿ, ಗಂಗಮ್ಮ ಬಜೇಂತ್ರಿ, ಸದಸ್ಯರು ಬಸಪ್ಪ ಹೆಗ್ಗೇರಿ, ಜಲದೇವ ಹೆಗ್ಗೇರಿ, ಬಸಯ್ಯ ಕಳ್ಳಿಮಠ, ಶಿವಯ್ಯ ಚಿಕ್ಕಮಠ, ಕಲ್ಲಪ್ಪ ಸಂದೂರಿ, ಸಂತೋಷ ಬಡವನ್ನವರ ಮಡಿವಾಳಪ್ಪ ಗಾಳಿ ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button