ಸ್ಥಳೀಯ ಸುದ್ದಿ
ಅಕ್ರಮ ದನಕರಗಳು ಸಾಗಾಟ- ಚಾಲಕ ಅರೆಸ್ಟ್
![](https://www.powercity.news/wp-content/uploads/2022/06/IMG-20220613-WA0021.jpg)
ಧಾರವಾಡ
ಬೆಳಗಾವಿ ಜಿಲ್ಲೆಯ ಕಿತ್ತೂರು ಸಂತೆಯಲ್ಲಿ ಅಕ್ರಮ ದನಕರುಗಳನ್ನು ತಂದು ರಾಣೆಬೆನ್ನೂರು ತಾಲೂಕಿಗೆ ಸಾಗಾಟ ಮಾಡುವಾಗ ಹಿಂದೂಪರ ಸಂಘಟನೆಗಳು ದಾಳಿ ಮಾಡಿ ದನಕರುಗಳನ್ನು ರಕ್ಷಣೆ ಮಾಡಿದ್ದಾರೆ.
![](http://powercity.news/wp-content/uploads/2022/06/IMG-20220613-WA0017.jpg)
ಧಾರವಾಡ ತಾಲೂಕಿನ
ನರೇಂದ್ರ ಟೋಲ್ ಪ್ಲಾಜಾದ ಸಮೀಪ ಈ ರೀತಿ ಅಕ್ರಮವಾಗಿ ಸಾಗಾಟವಾಗುತ್ತಿದ್ದ ಇಪ್ಪತ್ತಕ್ಕೂ ಹೆಚ್ಚು ಗೋವುಗಳನ್ನು ಶ್ರೀರಾಮಸೇನೆ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
![](http://powercity.news/wp-content/uploads/2022/06/IMG-20220613-WA0020.jpg)
20 ದನಗಳನ್ನು ಇವತ್ತು ಕಿತ್ತೂರು ಸಂತೆಯಿಂದ ತಂದು, ರಾಣೆಬೆನ್ನೂರಿಗೆ ಸಾಗಾಟ ಮಾಡುತ್ತಿದ್ದೇವೆ ಎಂದು ಡ್ರೈವರ್ ಬಾಯ್ಬಿಟ್ಟಿದ್ದಾನೆ.
ಸದ್ಯ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರಿಗೆ ಚಾಲಕನನ್ನು ಒಪ್ಪಿಸಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.