ಕವಿವಿ ನಿವೃತ್ತ ಕುಲಪತಿ ಮೇಲೆ ತನಿಖೆಗೆ ರಾಜ್ಯಪಾಲರ ಆದೇಶ
![](https://www.powercity.news/wp-content/uploads/2021/12/IMG_20211228_133600.jpg)
ಧಾರವಾಡ
ರಾಜ್ಯದ ಇತಿಹಾಸದಲ್ಲೇ ಭ್ರಷ್ಟಾಚಾರ ಪ್ರಕರಣದಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿಯೊಬ್ಬರು ಲೋಕಾಯುಕ್ತ ಪೊಲೀಸರಿಂದ ಬಂಧನವಾಗಿ ದೊಡ್ಡ ಸುದ್ದಿಯಾಗಿದ್ದರು.
![](http://powercity.news/wp-content/uploads/2021/12/IMG_20211228_132734.jpg)
ಈ ಪ್ರಕರಣದಲ್ಲಿ ಅಂದಿನ ಕುಲಪತಿಗಳು ಆಗಿದ್ದ ಎಚ್.ಬಿ.ವಾಲೀಕಾರ ಅವರು ಸುದೀರ್ಘ ಕಾನೂನು ಹೋರಾಟದ ಮೂಲಕ ನಿರಾಳವಾಗಿದ್ದರು.
![](http://powercity.news/wp-content/uploads/2021/12/IMG_20211228_132800.jpg)
ಈಗ ಮತ್ತೆ ಅವರಿಗೆ ಸಂಕಷ್ಟ ಎದುರಾಗಿದೆ.
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಆವರಣದಲ್ಲಿ ಸೌರ ವಿದ್ಯುತ್ ಘಟಕ ಅಳವಡಿಕೆ ಯೋಜನೆಯನ್ನು ಇತರೆ ಹಲವಾರು ಕಾಮಗಾರಿಗಳೊಂದಿಗೆ 2014 ರಲ್ಲಿ ಕೈಗೊಳ್ಳಲಾಗಿದ್ದು, ಈ ಯೋಜನೆಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ ರಾಜ್ಯಪಾಲರು ಆದೇಶ ಮಾಡಿದ್ದಾರೆ.
![](http://powercity.news/wp-content/uploads/2021/12/InShot_20211228_132522390.jpg)
ಈ ಕುರಿತು,30-12-2020, ರಂದು ಮಾನ್ಯ ಪೊಲೀಸ್ ವರಿಷ್ಠಾಧಿಕಾರಿಗಳು, ಭ್ರಷ್ಟಾಚಾರ ನಿಯಂತ್ರಣ ವಿಭಾಗ( Anti-Corruption Bureao),,ಬೆಳಗಾವಿ, ರವರಲ್ಲಿ ಶ್ರೀ. ಈರೇಶ ಅಂಚಟಗೇರಿ ಯವರು ಜಂಟಿಯಾಗಿ ದೂರೊಂದನ್ನು ದಾಖಲಿಸಿದ್ದರು.
![](http://powercity.news/wp-content/uploads/2021/12/InShot_20211228_132152894.jpg)
ಈ ಬಗ್ಗೆ ಗೌರವಾನ್ವಿತ ಕರ್ನಾಟಕ ರಾಜ್ಯಪಾಲರಲ್ಲಿ ಸೂಕ್ತ ಆದೇಶಕ್ಕಾಗಿ ಮನವಿಯನ್ನು ಸಲ್ಲಿಸಲಾಗಿತ್ತು.
![](http://powercity.news/wp-content/uploads/2021/12/InShot_20211228_132038715.jpg)
![](http://powercity.news/wp-content/uploads/2021/12/IMG_20211228_132333.jpg)
![](http://powercity.news/wp-content/uploads/2021/12/InShot_20211228_132236163.jpg)
ಇವರ ಮನವಿಯನ್ನು ಮನ್ನಿಸಿ ಗೌರವಾನ್ವಿತ ಕರ್ನಾಟಕ ರಾಜ್ಯಪಾಲರು 23-11-2021, ರಂದು ಮಾನ್ಯ ರಾಜಭವನ ಕಛೇರಿಯ ನಡವಳಿಯಂತೆ ಮತ್ತು ಭ್ರಷ್ಟಾಚಾರ ನಿಯಂತ್ರಣ 1988 ರ ಸೆಕ್ಷನ್ 17- A , 5 ನೇ ಕಲಂ ರ ಅಧಿಕಾರದ ಅಡಿಯಲ್ಲಿ , ಶ್ರೀ. H . B .ವಾಲೀಕಾರ ,ನಿವೃತ್ತ ಕುಲಪತಿಗಳು ,ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ , ಇವರ , ವಿರುದ್ದ ಸೂಕ್ತ ತನಿಖೆಯನ್ನು ನಡೆಸಲು ಅನುಮತಿ ಕೊಟ್ಟಿದ್ದಾರೆ.