Uncategorized
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಲೋಕಾಯುಕ್ತ ದಾಳಿ
![](https://www.powercity.news/wp-content/uploads/2023/09/IMG-20230916-WA0102-780x470.jpg)
![](https://www.powercity.news/wp-content/uploads/2023/09/IMG-20230916-WA0103-1024x460.jpg)
ಗದಗ: ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಲೋಕಾಯುಕ್ತ ದಾಳಿ ನಡೆದಿದೆ. ಖಚಿತ ಮಾಹಿತಿಯ ಮೇರೆಗೆ ಲೋಕಾಯುಕ್ತ ಡಿ.ಎಸ್.ಪಿ ಶಂಕರ ರಾಗಿ ನೇತೃತ್ವ ದಲ್ಲಿ ದಾಳಿ ನಡೆಸಲಾಗಿದ್ದು ರೋಣ ತಾಲೂಕಾ ಸಿ.ಡಿ.ಪಿ.ಒ ಬಸಮ್ಮ ಹೂಲಿ ಬಲೆಗೆ ಬಿದ್ದಿದ್ದಾರೆ.
![](https://www.powercity.news/wp-content/uploads/2023/09/IMG-20230916-WA0101-1024x460.jpg)
ಗಜೇಂದ್ರಗಡ ನಗರದ ಪಾಲಿಟೆಕ್ನಿಕ್ ಕಾಲೇಜು ಎದುರಿಗೆ ಇರುವ ಡಾಬಾ ಒಂದರಲ್ಲಿ ಅನಿಲ ದೊಡ್ಡಿ ಎಂಬುವರ ಗುತ್ತಿಗೆದಾರನ ದೂರಿನ ಆಧಾರದ ಮೇಲೆ ದಾಳಿ ರೋಣ ಸಿಡಿಪಿಒ ಮತ್ತು ಎಫ್ಡಿಸಿ ಜಗದೀಶ ಇಬ್ಬರು ಸೇರಿ 1.5 ಲಕ್ಷ ಲಂಚ ಸ್ವೀಕರಿಸುವ ಸಂದರ್ಭದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.
![](https://www.powercity.news/wp-content/uploads/2023/09/IMG-20230916-WA0102.jpg)
ರೋಣ ಸಿ.ಡಿ.ಪಿ.ಒ.ಬಸಮ್ಮ ಹೂಲಿ ಮೇಲೆ ಲೋಕಾಯುಕ್ತ ಕಚೇರಿಯಲ್ಲಿ ಮೊದಲೇ ದಾಖಲಾದ ದೂರಿನ ಅನ್ವಯ ದಾಳಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.ಹೆಚ್ಚಿನ ವಿಚಾರಣೆಗೆ ರೋಣಕ್ಕೆ ಕರೆದ್ಯೊದ ಲೋಕಾಯುಕ್ತ ಸಿಬ್ಬಂದಿ.ಮತ್ತಷ್ಟು ಮಾಹಿತಿಯನ್ನು ಕಲೆಹಾಕುತ್ತಿರುವ ಲೋಕಾಯುಕ್ತ ಸಿಬ್ಬಂದಿ.