Uncategorized

ಗ್ರಾಮ ಪಂಚಾಯತನಲ್ಲಿ ಮಾರಾಮಾರಿ- ಬಿಜೆಪಿ ಬೆಂಬಲಿತ ಗ್ರಾ.ಪಂ ಉಪಾಧ್ಯಕ್ಷೆ ಗಂಡನಿಂದ ಓರ್ವ ಸದಸ್ಯನ ಮೇಲೆ ಹಲ್ಲೆ- ಗಾಯಾಳು ಆಸ್ಪತ್ರೆಗೆ ದಾಖಲು

ಧಾರವಾಡ

ಧಾರವಾಡ ತಾಲೂಕಿನ ಕನಕೂರು ಗ್ರಾಮ ಪಂಚಾಯತನಲ್ಲಿ ಮಾರಾಮಾರಿ ನಡೆದಿದೆ.

ಸಭೆಯಲ್ಲಿ ಉಪಾಧ್ಯಕ್ಷೆಯ ಗಂಡ ಒಳಗೆ ಬಂದಿರುವುದನ್ನು ಪ್ರಶ್ನೆ ಮಾಡಿದಕ್ಕೆ ಹಲ್ಲೆ ಮಾಡಲಾಗಿದೆ.

ಈರಪ್ಪ ಬಸಪ್ಪ ತಲವಾಯಿ ಗಾಯಗೊಂಡ ತಲವಾಯಿ ಗ್ರಾಮ ಪಂಚಾಯತ್ ಸದಸ್ಯ ಆಗಿದ್ದಾನೆ.

ಗಂಭೀರವಾಗಿ ಗಾಯಗೊಂಡ ಗ್ರಾಮ ಪಂಚಾಯತಿ ಸದಸ್ಯ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕನಕೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶಬನಾಬಿ ಹಂಚಿನಾಳ ಪತಿ ಚಮನಸಾಬ ಹಂಚಿನಾಳ ಅವರಿಂದ ಹಲ್ಲೆ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.‌

ಕನಕೂರು, ಕವಲಗೇರಿ, ಚಂದನಮಟ್ಟಿ, ತಲವಾಯಿ, ವನಹಳ್ಳಿ ಸೇರಿ 5 ಗ್ರಾಮಗಳ ವ್ಯಾಪ್ತಿ ಗ್ರಾಮ ಪಂಚಾಯತಿ ಕನಕೂರು ಗ್ರಾಮ ಪಂಚಾಯತಿ ಇದು.‌

ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಒಟ್ಟು 17 ಸದಸ್ಯ ಬಲದ ಗ್ರಾಮ ಪಂಚಾಯತಿಯಲ್ಲಿ ಬಿಜೆಪಿ 9- ಹಾಗೂ ಕಾಂಗ್ರೆಸ 8 ಬೆಂಬಲಿತ ಸದಸ್ಯರು ಇದ್ದರೆ, ಬಿಜೆಪಿ ಬೆಂಬಲಿತ ಅಧ್ಯಕ್ಷ ಉಪಾಧ್ಯಕ್ಷರಾಗಿರುವ ಕನಕೂರು ಗ್ರಾಮ ಪಂಚಾಯತಿ. ‌

Related Articles

Leave a Reply

Your email address will not be published. Required fields are marked *

Back to top button