Uncategorized

ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಲೋಕಾಯುಕ್ತ ದಾಳಿ

ಗದಗ: ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಲೋಕಾಯುಕ್ತ ದಾಳಿ ನಡೆದಿದೆ. ಖಚಿತ ಮಾಹಿತಿಯ ಮೇರೆಗೆ ಲೋಕಾಯುಕ್ತ ಡಿ.ಎಸ್.ಪಿ ಶಂಕರ ರಾಗಿ ನೇತೃತ್ವ ದಲ್ಲಿ ದಾಳಿ ನಡೆಸಲಾಗಿದ್ದು ರೋಣ ತಾಲೂಕಾ ಸಿ.ಡಿ.ಪಿ.ಒ ಬಸಮ್ಮ ಹೂಲಿ ಬಲೆಗೆ ಬಿದ್ದಿದ್ದಾರೆ.

ಗಜೇಂದ್ರಗಡ ನಗರದ ಪಾಲಿಟೆಕ್ನಿಕ್ ಕಾಲೇಜು ಎದುರಿಗೆ ಇರುವ ಡಾಬಾ ಒಂದರಲ್ಲಿ ಅನಿಲ ದೊಡ್ಡಿ ಎಂಬುವರ ಗುತ್ತಿಗೆದಾರನ ದೂರಿನ ಆಧಾರದ ಮೇಲೆ ದಾಳಿ ರೋಣ ಸಿಡಿಪಿಒ ಮತ್ತು ಎಫ್ಡಿಸಿ ಜಗದೀಶ ಇಬ್ಬರು ಸೇರಿ 1.5 ಲಕ್ಷ ಲಂಚ ಸ್ವೀಕರಿಸುವ ಸಂದರ್ಭದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.

ರೋಣ ಸಿ.ಡಿ.ಪಿ.ಒ.ಬಸಮ್ಮ ಹೂಲಿ ಮೇಲೆ ಲೋಕಾಯುಕ್ತ ಕಚೇರಿಯಲ್ಲಿ ಮೊದಲೇ ದಾಖಲಾದ ದೂರಿನ ಅನ್ವಯ ದಾಳಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.ಹೆಚ್ಚಿನ ವಿಚಾರಣೆಗೆ ರೋಣಕ್ಕೆ ಕರೆದ್ಯೊದ ಲೋಕಾಯುಕ್ತ ಸಿಬ್ಬಂದಿ.ಮತ್ತಷ್ಟು ಮಾಹಿತಿಯನ್ನು ಕಲೆಹಾಕುತ್ತಿರುವ ಲೋಕಾಯುಕ್ತ ಸಿಬ್ಬಂದಿ.

Related Articles

Leave a Reply

Your email address will not be published. Required fields are marked *

Back to top button