ಧಾರವಾಡ
ನವಲಗುಂದದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹುಟ್ಟುಹಬ್ಬ ಆಚರಣೆ. ರೋಗಿಗಳಿಗೆ ಹಣ್ಣು ಹಂಪಲ ವಿತರಣೆ.
![](https://www.powercity.news/wp-content/uploads/2021/12/IMG-20211216-WA0142.jpg)
ಧಾರವಾಡ
ನವಲಗುಂದದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ 63 ನೇ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಎಚ್ ಡಿ ಕುಮಾರಸ್ವಾಮಿ ಅಭಿಮಾನಿಗಳ ಬಳಗದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
![](http://powercity.news/wp-content/uploads/2021/12/IMG-20211216-WA0141.jpg)
ಕುಮಾರಸ್ವಾಮಿಯವರ ಹುಟ್ಟುಹಬ್ಬದ ನಿಮಿತ್ತ ಸರ್ಕಾರಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು ಹಂಪಲ ವಿತರಿಸಲಾಯಿತು. ನಂತರ ಕುಮಾರಣ್ಣನವರ ಹುಟ್ಟುಹಬ್ಬದ ನಿಮಿತ್ತ ಕೇಕ್ ಕತ್ತರಿಸಿ, ಶುಭ ಕೋರಲಾಯಿತು.
ಈ ಸಂದರ್ಭದಲ್ಲಿ ಅನ್ವರ ಹುಸೇನ್ ಮೂಲಿಮನಿ, ಕಾಶಿಮ ಅಲ್ಲಿಬಾಯಿ, ಮಮ್ಮದ ಮಟಿಗೇರ, ಪ್ರಕಾಶ ಅಂಗಡಿ, ಇಮ್ತಿಯಾಜ್ ಜಮಖಾನ, ಷರೀಫ್ ಗೋವನಕೊಪ್ಪ, ಯಾಶೀನ ನೀಲಿ, ಮೋದಿನಸಾಬ ತೋಟದ, ಫಾರುಖ್ ಮೋತಿ, ಭಾಗವಹಿಸಿದ್ದರು.