ಧಾರವಾಡ

ನವಲಗುಂದದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹುಟ್ಟುಹಬ್ಬ ಆಚರಣೆ. ರೋಗಿಗಳಿಗೆ ಹಣ್ಣು ಹಂಪಲ ವಿತರಣೆ.

ಧಾರವಾಡ

ನವಲಗುಂದದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ 63 ನೇ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಎಚ್ ಡಿ ಕುಮಾರಸ್ವಾಮಿ ಅಭಿಮಾನಿಗಳ ಬಳಗದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕುಮಾರಸ್ವಾಮಿಯವರ ಹುಟ್ಟುಹಬ್ಬದ ನಿಮಿತ್ತ ಸರ್ಕಾರಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು ಹಂಪಲ ವಿತರಿಸಲಾಯಿತು. ನಂತರ ಕುಮಾರಣ್ಣನವರ ಹುಟ್ಟುಹಬ್ಬದ ನಿಮಿತ್ತ ಕೇಕ್ ಕತ್ತರಿಸಿ, ಶುಭ ಕೋರಲಾಯಿತು.

ಈ ಸಂದರ್ಭದಲ್ಲಿ ಅನ್ವರ ಹುಸೇನ್ ಮೂಲಿಮನಿ, ಕಾಶಿಮ ಅಲ್ಲಿಬಾಯಿ, ಮಮ್ಮದ ಮಟಿಗೇರ, ಪ್ರಕಾಶ ಅಂಗಡಿ, ಇಮ್ತಿಯಾಜ್ ಜಮಖಾನ, ಷರೀಫ್ ಗೋವನಕೊಪ್ಪ, ಯಾಶೀನ ನೀಲಿ, ಮೋದಿನಸಾಬ ತೋಟದ, ಫಾರುಖ್ ಮೋತಿ, ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button