ಸ್ಥಳೀಯ ಸುದ್ದಿ

ವಿಧಾನಸಭೆ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ವಿನಯ ಕುಲಕರ್ಣಿ ಪ್ರಮಾಣ ವಚನ

ಬೆಂಗಳೂರು

ದೇಶದ ಹಾಗೂ ರಾಜ್ಯದ ಗಮನ ಸೆಳೆದಿದ್ದ, ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಐತಿಹಾಸಿಕ ಗೆಲುವು ‌ಸಾಧಿಸುವ ಮೂಲಕ ಮಾಜಿ ಸಚಿವ ವಿನಯ ಕುಲಕರ್ಣಿ, ಇತಿಹಾಸ ಸೃಷ್ಟಿ ಮಾಡಿದ್ದಾರೆ.

3 ವರ್ಷದಿಂದ ಧಾರವಾಡ ಗ್ರಾಮೀಣ ‌ಕ್ಷೇತ್ರಕ್ಕೆ ಕಾಲಿಡದೇ ಗಡಿ ಭಾಗದಲ್ಲಿ ಇದ್ದುಕೊಂಡು ರಾಜಕೀಯ ಚಾಕಚಕ್ಯತೆಯಿಂದ ಶಾಸಕರಾಗಿ ಆಯ್ಕೆ ಆದ ಇವರು ವಿಧಾನಸೌಧದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ರು.

ಧಾರವಾಡ ಗ್ರಾಮೀಣ ಕ್ಷೇತ್ರದಿಂದ 3 ಬಾರಿ ಆಯ್ಕೆ ಆಗಿರುವ ‌ವಿನಯ‌ ಕುಲಕರ್ಣಿ ಅವರು, ಸಿಎಂ ಸಿದ್ದರಾಮಯ್ಯಾ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ಅವರಿಗೆ ಅತ್ಯಾಪ್ತರು.

ವಿನಯ ಕುಲಕರ್ಣಿ ಅವರಿಗೆ
ಈ ಬಾರಿ‌ ಕ್ಯಾಬಿನೇಟನಲ್ಲಿ ಉತ್ತಮ ಕಾರ್ಯನಿರ್ವಹಣೆಯ‌ ಜವಾಬ್ದಾರಿ ಕೊಡುವ ಸಾಧ್ಯತೆಗಳು ಹೆಚ್ಚಿವೆ‌ ಎನ್ನುವ ಮಾತುಗಳು ಬೆಂಗಳೂರಿನಲ್ಲಿ ಹರಿದಾಡುತ್ತಿವೆ.

Related Articles

Leave a Reply

Your email address will not be published. Required fields are marked *

Back to top button