ಧಾರವಾಡ

ಡಿಸಿ‌ ಕಚೇರಿ ಮುಂದೆ ನಡೆದ ಮಾರಾಮಾರಿ- ಪೊಲೀಸರು ದಾಖಲಿಸಿಕೊಂಡಿದ್ದಾರೆ ಸುಮೋಟೊ ಕೇಸ್..

ಧಾರವಾಡ

ನಿನ್ನೆ ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದಿದ್ದು 2 ಗ್ಯಾಂಗ್‌ ನಡುವಿನ ಮಾರಾಮಾರಿ ವಿದ್ಯಾಕಾಶಿ ಜನರಿಗೆ ಆತಂಕ ಹುಟ್ಟಿಸಿತ್ತು.

ಈ ಗ್ಯಾಂಗ್ ಮಾರಾಮಾರಿಯಲ್ಲಿ ಎ೧ ಆರೋಪಿ ತೇಜಸ್ವಿನಗರದ ಅಲ್ಲಾವುದ್ದೀನ್ ಡಲ್ಯಾ, ಆಗಿದ್ದಾನೆ ಉಳಿದಂತೆ ದುಷ್ಕರ್ಮಿಗಳ ಗುಂಡಿಗೆ ಇತ್ತೀಚಿಗೆ ಬಲಿಯಾಗಿರುವ ರೌಡಿಶೀಟರ್ ಪ್ರುಟ್ ಇರ್ಫಾನ ಮಗ ಕೂಡ ಇದ್ದ ಈ ಮಾರಾಮಾರಿಯಲ್ಲಿ ಎನ್ನುವುದನ್ನು ಪೊಲೀಸರು ತಿಳಿಸಿದ್ದಾರೆ.

ಈಗಾಗಲೇ ಸಾರ್ವಜನಿಕ ಸ್ಥಳದಲ್ಲಿ ಅದ್ರಲ್ಲೂ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದ ಘಟನೆ ಇದಾಗಿದ್ದರಿಂದ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ.

ಮುಂಡಗೋಡ ಮೂಲದ ರಹೀಮ್ ಎಂಬಾತ ಪ್ರುಟ್ ಇರ್ಫಾನನ ಮಗನಾದ ಅರ್ಭಾಜ ಹಂಚಿನಾಳ ಜೋತೆಗೆ ಇರುತ್ತಿದ್ದು, ಇವನ 35 ಸಾವಿರ ಹಣದ ವ್ಯವಹಾರಕ್ಕೆ ಈ ಜಗಳ ನಡೆದಿದೆ.

ಘಟನೆಯಲ್ಲಿ ಅಂಗಿ ಬಿಚ್ಚಿ ಹೊಡಿಸಿಕೊಂಡಿದ್ದು, ಇದೇ ರಹೀಮ್ ಡಲ್ಯಾನ ಹುಡುಗರು ರಹೀಮ್ ಮೇಲೆ ಹಲ್ಲೆ ಮಾಡಿದ್ದಾರೆ.

ಘಟನೆ ಸಂಬಂಧ 9 ಮಂದಿ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಕೆಲವರು ಪರಾರಿಯಾಗಿದ್ದಾರೆ

Related Articles

Leave a Reply

Your email address will not be published. Required fields are marked *

Back to top button