ಧಾರವಾಡ
25 ಲಕ್ಷ ಮೌಲ್ಯದ ಚಿನ್ನಭರಣ ದೋಚಿದ ಖದೀಮರು ಅಂದರ್
![](https://www.powercity.news/wp-content/uploads/2022/02/IMG-20220222-WA0021.jpg)
ಧಾರವಾಡ
ಧಾರವಾಡ ವಿದ್ಯಾಗಿರಿ ಪೊಲೀಸರು ಮನೆ ಕಳ್ಳತನ ಮಾಡಿದ್ದ ಐದು ಕಳ್ಳರನ್ನ ಹಿಡಿಯುವಲ್ಲಿ ಸಫಲರಾಗಿದ್ದಾರೆ. ಕಳೆದ ಜನವರಿ 27 ರಂದು ಧಾರವಾಡ ನಗರದ ಕೇಶವನಗರದಲ್ಲಿ ಮಹೇಂದ್ರಕರ ಎಂಬುವವರ ಮನೆ ಕಳ್ಳತನವಾಗಿತ್ತು.
![](http://powercity.news/wp-content/uploads/2022/02/IMG-20220222-WA0023.jpg)
ಈ ಹಿನ್ನೆಲೆ ಈ ಜಾಡನ್ನು ಬೆನ್ನತ್ತಿದ್ದ ಧಾರವಾಡ ವಿದ್ಯಾಗಿರಿ ಪೊಲೀಸರು ಬೆಂಗಳೂರು ಮೂಲದ ಇಬ್ಬರು ಕಳ್ಳರನ್ನ ಬಂಧಿಸಿದ್ದಾರೆ.
ಅಲ್ಲದೇ ಈ ಕಳ್ಳತನ ಮಾಡಿದ್ದ ಚಿನ್ನವನ್ನ ಖರೀದಿ ಮಾಡಿದ್ದ ಮೂವರನ್ನ ಕೂಡಾ ಜೈಲಿಗೆ ಅಟ್ಟಿದ್ದಾರೆ. ಇನ್ನು ಬಂಧಿತರಿಂದ 25 ಲಕ್ಷ ಮೌಲ್ಯದ 562 ಗ್ರಾಂ ಚಿನ್ನ, 20 ಸಾವಿರ ನಗದು ಹಾಗೂ 4.5 ಲಕ್ಷ ಮೌಲ್ಯದ ಎರಡು ಕಾರು ವಶಕ್ಕೆ ಪಡೆದಿದ್ದಾರೆ.
![](http://powercity.news/wp-content/uploads/2022/02/IMG-20220222-WA0022.jpg)
ಪ್ರಕರಣ ಬೇಧಿಸಿದ ಪೊಲೀಸ್ ತಂಡಕ್ಕೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಲಾಬುರಾಮ್ 25 ಸಾವಿರ ಬಹುಮಾನ ಘೋಷಣೆ ಮಾಡಿದ್ದಾರೆ.