ಧಾರವಾಡ

25 ಲಕ್ಷ ಮೌಲ್ಯದ ಚಿನ್ನಭರಣ ದೋಚಿದ ಖದೀಮರು ಅಂದರ್

ಧಾರವಾಡ

ಧಾರವಾಡ ವಿದ್ಯಾಗಿರಿ ಪೊಲೀಸರು ಮನೆ ಕಳ್ಳತನ ಮಾಡಿದ್ದ ಐದು ಕಳ್ಳರನ್ನ ಹಿಡಿಯುವಲ್ಲಿ ಸಫಲರಾಗಿದ್ದಾರೆ. ಕಳೆದ ಜನವರಿ 27 ರಂದು ಧಾರವಾಡ ನಗರದ ಕೇಶವನಗರದಲ್ಲಿ ಮಹೇಂದ್ರಕರ ಎಂಬುವವರ ಮನೆ ಕಳ್ಳತನವಾಗಿತ್ತು.

ಈ ಹಿನ್ನೆಲೆ ಈ ಜಾಡನ್ನು ಬೆನ್ನತ್ತಿದ್ದ ಧಾರವಾಡ ವಿದ್ಯಾಗಿರಿ ಪೊಲೀಸರು ಬೆಂಗಳೂರು ಮೂಲದ ಇಬ್ಬರು ಕಳ್ಳರನ್ನ ಬಂಧಿಸಿದ್ದಾರೆ.

ಅಲ್ಲದೇ ಈ ಕಳ್ಳತನ ಮಾಡಿದ್ದ ಚಿನ್ನವನ್ನ ಖರೀದಿ ಮಾಡಿದ್ದ ಮೂವರನ್ನ ಕೂಡಾ ಜೈಲಿಗೆ ಅಟ್ಟಿದ್ದಾರೆ. ಇನ್ನು ಬಂಧಿತರಿಂದ 25 ಲಕ್ಷ ಮೌಲ್ಯದ 562 ಗ್ರಾಂ ಚಿನ್ನ, 20 ಸಾವಿರ ನಗದು ಹಾಗೂ 4.5 ಲಕ್ಷ ಮೌಲ್ಯದ ಎರಡು ಕಾರು ವಶಕ್ಕೆ ಪಡೆದಿದ್ದಾರೆ.

ಪ್ರಕರಣ ಬೇಧಿಸಿದ ಪೊಲೀಸ್ ತಂಡಕ್ಕೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಲಾಬುರಾಮ್ 25 ಸಾವಿರ ಬಹುಮಾನ ಘೋಷಣೆ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button