BREAKING NEWSCITY CRIME NEWSDHARWAD

₹5 ಕೋಟಿ ವೆಚ್ಚದ ನೂತನ ಉತ್ತರಾದಿ ಮಠದ ಕಟ್ಟಡ ಲೋಕಾರ್ಪಣೆ..!

Dakhani

POWER CITYNEWS: DHARWAD/ಭಕ್ತರ ನೆರವು ಹಾಗೂ ಧಾರ್ಮಿಕ ಚಟುವಟಿಕೆಗಳ ನಿರಂತರತೆಗೆ ವಿದ್ಯಾಧೀಶ ಆಚಾರ್ಯ ಗುತ್ತಲ್ ಕರೆ

ಧಾರವಾಡ: ಇಲ್ಲಿನ ನೂತನ ಉತ್ತರಾದಿ ಮಠದ ಕಟ್ಟಡದ ವಾಸ್ತುಶಾಂತಿ ಮತ್ತು ಉದ್ಘಾಟನಾ ಮಹೋತ್ಸವವು ಬುಧವಾರ ಅತ್ಯಂತ ಸಡಗರ-ಸಂಭ್ರಮದಿಂದ ಜರುಗಿತು. ಉತ್ತರಾದಿ ಮಠದ ವ್ಯವಸ್ಥಾಪಕ ನಿರ್ದೇಶಕರಾದ ಪಂಡಿತ್ ವಿದ್ಯಾಧೀಶ ಆಚಾರ್ಯ ಗುತ್ತಲ್ ಅವರು ನೂತನ ಕಟ್ಟಡವನ್ನು ಉದ್ಘಾಟಿಸಿ, ವಾಸ್ತುಶಾಂತಿ ಕಾರ್ಯಕ್ರಮವನ್ನು ನೆರವೇರಿಸಿದರು.

​ಮಠವು ಭಕ್ತರ ಹೃದಯದ ಕಟ್ಟಡ: ಪಂ. ವಿದ್ಯಾಧೀಶ ಆಚಾರ್ಯ

​ಕಟ್ಟಡ ಉದ್ಘಾಟಿಸಿ ಮಾತನಾಡಿದ ವಿದ್ಯಾಧೀಶ ಆಚಾರ್ಯರು, “ಭಕ್ತರ ಉದಾರ ಧನಸಹಾಯ ಹಾಗೂ ಸಹಕಾರದಿಂದ ಸುಮಾರು ೫ ಕೋಟಿ ರೂಪಾಯಿ ವೆಚ್ಚದಲ್ಲಿ ಈ ಭವ್ಯ ನೂತನ ಕಟ್ಟಡವನ್ನು ನಿರ್ಮಿಸಲಾಗಿದೆ. ಇದು ಕೇವಲ ಕಲ್ಲಿನ ಕಟ್ಟಡವಲ್ಲ, ನಿಮ್ಮೆಲ್ಲರ ಹೃದಯದ ಕಟ್ಟಡ” ಎಂದು ಬಣ್ಣಿಸಿದರು.

​”ಈ ಮಠದಲ್ಲಿ ನಿತ್ಯ ಧರ್ಮ-ಕರ್ಮಗಳ ಆಚರಣೆಗಳು ನಡೆಯಬೇಕು. ಪಾಠ-ಪ್ರವಚನಗಳು ನಿರಂತರವಾಗಿ ಸಾಗಬೇಕು. ದೇವತಾ ಸ್ಮರಣೆಯೊಂದಿಗೆ ಸಜ್ಜನರಿಂದ ಅನೇಕ ಧರ್ಮ ಜಾಗೃತಿಯ ತಿಳುವಳಿಕೆಯ ಮಾತುಗಳು ಇಲ್ಲಿ ಸದಾ ಮೊಳಗಿದಾಗ ಮಾತ್ರ ಈ ಭವ್ಯ ಕಟ್ಟಡವನ್ನು ನಿರ್ಮಿಸಿದ್ದಕ್ಕೂ ಸಾರ್ಥಕತೆ ಸಿಗುತ್ತದೆ,” ಎಂದು ಅವರು ಭಕ್ತರಿಗೆ ಕರೆ ನೀಡಿದರು.

​ಶ್ರೀ ಸತ್ಯಪ್ರಮೋದ ತೀರ್ಥ ಶ್ರೀಪಾದಂಗಳವರಿಗೆ ಸಮರ್ಪಣೆ

​ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಂ. ಶಶಿಧರಾಚಾರ್ಯ ಅವರು ಮಾತನಾಡಿ, “ಈ ಮಠದ ಕಟ್ಟಡದ ಕೆಲಸ ಎಂದೋ ಆಗಬೇಕಿತ್ತು, ತಾಂತ್ರಿಕ ಕಾರಣಗಳಿಂದ ಸ್ವಲ್ಪ ವಿಳಂಬವಾಗಿದೆ. ಪರಮಪೂಜ್ಯ ಶ್ರೀ ಸತ್ಯಪ್ರಮೋದ ತೀರ್ಥ ಶ್ರೀಪಾದಂಗಳವರು ಜನಿಸಿದ ಪವಿತ್ರ ಭೂಮಿ ಈ ಧಾರವಾಡ. ಅವರ ದಿವ್ಯ ನೆನಪಿಗಾಗಿ ಮತ್ತು ಗೌರವಾರ್ಥವಾಗಿ ಈ ನೂತನ ಕಟ್ಟಡವನ್ನು ಶ್ರೀ ಸತ್ಯಪ್ರಮೋದ ಶ್ರೀಪಾದಂಗಳವರಿಗೆ ಭಕ್ತಿಪೂರ್ವಕವಾಗಿ ಸಮರ್ಪಣೆ ಮಾಡಿದ್ದೇವೆ” ಎಂದು ತಿಳಿಸಿದರು.

​2,000ಕ್ಕೂ ಹೆಚ್ಚು ಭಕ್ತರ ಭಾಗಿ

​ಈ ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮದಲ್ಲಿ ಧಾರವಾಡ ಹಾಗೂ ಸುತ್ತಮುತ್ತಲಿನ ಭಾಗಗಳಿಂದ ೨೦೦೦ಕ್ಕೂ ಹೆಚ್ಚು ಭಗವದ್ಭಕ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು.

​ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಮುಖರಾದ:

​ಚಾತುರ್ಮಾಸ ಸಮಿತಿಯ ಕಾರ್ಯಾಧ್ಯಕ್ಷರಾದ ಹನುಮಂತ ಕೊಟಬಾಗಿ, ಗೀತಾ ಕೊಟಬಾಗಿ, ಸುಮಾ ರಾಯಚೂರ, ಸುಮತಿ ಬಿದರಕುಂದಿ ಸೇರಿದಂತೆ ಮಠದ ಪದಾಧಿಕಾರಿಗಳು ಹಾಗೂ ಪ್ರಮುಖ ಗಣ್ಯರು ಉಪಸ್ಥಿತರಿದ್ದರು.

​ಪಂ. ಧ್ರುವಚಾರ್ಯ ಗಲಗಲಿ

​ರಾಮಾಚಾರ್ಯ ಬಾಗಲಕೋಟೆ

​ಪಂ. ಅಧ್ಯಾಪಕ ರಾಮಾಚಾರ್ಯ

​ಪಂ. ವಾದಿರಾಜ ಆಚಾರ್ಯ ಮಠ

​ಪಂ. ಪ್ರಹ್ಲಾದ ಆಚಾರ್ಯ ಗಲಗಲಿ

​ಶ್ರೀಕಾಂತ ಆಚಾರ್ಯ ಬಿದರಗುಂದಿ

​ಸಂದೀಪ್ ಆಚಾರ್ಯ ಪುರೋಹಿತ್

ಸುರೇಶ ಆಚಾರ್ಯ ರಾಯಚೂರ ​ಚಾತುರ್ಮಾಸ ಸಮಿತಿಯ ಕಾರ್ಯಾಧ್ಯಕ್ಷರಾದ ಹನುಮಂತ ಕೊಟಬಾಗಿ, ಗೀತಾ ಕೊಟಬಾಗಿ, ಸುಮಾ ರಾಯಚೂರ, ಸುಮತಿ ಬಿದರಕುಂದಿ ಸೇರಿದಂತೆ ಮಠದ ಪದಾಧಿಕಾರಿಗಳು ಹಾಗೂ ಪ್ರಮುಖ ಗಣ್ಯರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *