DHARWADHubballiProtest

DCET-PGCET ನೇ ಸುತ್ತಿನ ಕಟ್ ಆಫ್ ಬಿಡುಗಡೆ ಕ್ಯಾಸುವಲ್ ರೌಂಡ್ಸ್‌ಗೆ ಆಗ್ರಹಿಸಿ :ಪ್ರತಿಭಟನೆ!

ABVP PROTEST

POWERCITY NEWS : HUBBALLI

ಹುಬ್ಬಳ್ಳಿ : ವಿಧ್ಯಾರ್ಥಿಗಳ ಕನಸಿಗೆ ತಣ್ಣಿರೆರಚುವ ಕೆಲಸ ಪರೀಕ್ಷಾ ಪ್ರಾಧಿಕಾರದಿಂದ ನಡೆಯುತ್ತಿದೆ ಈ ಕೂಡಲೆ ತಾಂತ್ರಿಕ ದೋಷಗಳನ್ನು ಸರಿಪಡಿಸುವಂತೆ ಆಗ್ರಹಿಸಿ ನಗರದಲ್ಲಿ ABVP ಪ್ರತಿಭಟನೆ ಹಮ್ಮಿಕೊಂಡಿತ್ತು.

ಹೌದು ಇಂಜಿನಿಯರಿಂಗ್, MBA, Mcom ಈ ರೀತಿಯ ಉನ್ನತ ಪದವಿಗಳಿಗೆ ಸೇರಬೇಕೆಂಬುದು ಲಕ್ಷಾಂತರ ವಿದ್ಯಾರ್ಥಿಗಳ ಕನಸಾಗಿರುತ್ತದೆ. ಇದಕ್ಕಾಗಿ ಹಗಲು ಇರುಳು ಶ್ರಮಪಟ್ಟು ಪ್ರವೇಶ ಪರೀಕ್ಷೆಗಳನ್ನು ಬರೆದು ಉತ್ತಮ ರಾಂಕಿಂಗ್ ಪಡೆದು ಪ್ರತಿಷ್ಠಿತ ಕಾಲೇಜುಗಳಲ್ಲಿ ದಾಖಲಾಗುವ ಕನಸು ಕಂಡಿರುತ್ತಾರೆ. ಇಂತಹ ಕನಸು ಕಂಡ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪಾರದರ್ಶಕ ಪ್ರಕ್ರಿಯೆ ಮೂಲಕ ಪ್ರೋತ್ಸಾಹವಾಗಿ ನಿಲ್ಲಬೇಕಿತ್ತು. ಆದರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈ ಪರೀಕ್ಷೆಗಳನ್ನು ಕೈಗೊಂಡು ಪ್ರವೇಶಾತಿಗಳನ್ನು ನೀಡುವ ನಿಟ್ಟಿನಲ್ಲಿ ಕೆಲವು ಲೋಪದೋಷಗಳನ್ನು ಮಾಡುತ್ತಿದೆ, ಅದರಲ್ಲಿ ಪ್ರಮುಖವಾದದ್ದು ಪ್ರಕ್ರಿಯೆ DCET ಮತ್ತು PGCET.

ತಾಂತ್ರಿಕ ಶಿಕ್ಷಣದಲ್ಲಿ ಮುಂದುವರೆಯಬೇಕೆಂಬ ಅಪೇಕ್ಷೆಯನ್ನಿಟ್ಟುಕೊಂಡು ಡಿಪ್ಲೋಮಾ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ನೇರ ಎರಡನೇ ವರ್ಷದ ಇಂಜಿನಿಯರಿಂಗ್‌ ಪದವಿಗೆ ದಾಖಲಾಗುವ ಈ ಪ್ರವೇಶಾತಿ (Lateral Entry) ಮತ್ತು MBA, Mcom ನತಂಹ ಉನ್ನತ ಪದವಿಗಳಿಗೆ ಸೇರುವ ಪ್ರಕ್ರಿಯೆಯಲ್ಲಿ (PGCET) ಲೋಪ ದೋಷಗಳು ಕಂಡುಬಂದಿವೆ ಎಂದಿ ಆರೋಪಿಸಿದೆ ಎಪಿವಿಪಿ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕಳೆದ ಎರಡು ವರ್ಷಗಳಿಂದ DCET ಮತ್ತು PGCET ಯ ಎರಡನೇ ಸುತ್ತಿನ ಕಟ್ ಆಫ್ ಅಂಕಪಟ್ಟಿ ಮತ್ತು ಉಳಿದಿರುವ ವರದಿ ಪ್ರಕಟಿಸದೇ ಇರುವುದು ಅನೇಕ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಪ್ರಕ್ರಿಯೆ ಪ್ರವೇಶಾತಿ ಪ್ರಕ್ರಿಯೆ ಬಗ್ಗೆ ಸಂದೇಹ ಉಂಟುಮಾಡುತ್ತಿದೆ ಎಂದರು. ಮೊದಲನೇ ಸುತ್ತಿನಲ್ಲಿ ಪ್ರವೇಶಾತಿ ಸಿಗದ ವಿದ್ಯಾರ್ಥಿಗಳು ಎರಡನೇ ಸುತ್ತಿನಲ್ಲಿ ತಮ್ಮ ಆಯ್ಕೆಗಳನ್ನು ನೀಡುವ ನಿಯಮ ಇದೆ. ಆದರೆ ಇಲ್ಲಿಯೂ ಪ್ರವೇಶಾತಿ ಸಿಗದೆ, ಮೂರನೇ ಸುತ್ತಿನಲ್ಲಿ ತಮಗೆ ಬೇಕಾದಂತಹ ಕಾಲೇಜನ್ನು ಆಯ್ದುಕೊಳ್ಳಲು ಅನುಕೂಲವಾಗಲು ಎರಡನೇ ಸುತ್ತಿನ ಕಟ್ ಆಫ್ ಅಂಕ ಪ್ರಮುಖವಾಗುತ್ತದೆ. ಆದರೆ ಎರಡನೇ ಸುತ್ತಿನಲ್ಲಿ ಪ್ರವೇಶಾತಿ ಪಡೆದ ಕೆಲ ವಿದ್ಯಾರ್ಥಿಗಳು ತಮಗೆ ನೀಡಿದಂತಹ ಕಾಲೇಜುಗಳಿಗೆ ಪ್ರವೇಶಾತಿಯನ್ನು ಪಡೆಯದೆ ಖಾಲಿ ಬಿಡುತ್ತಾರೆ, ಇಂತಹ ಸೀಟುಗಳನ್ನು ಕಾಲೇಜಿನ ಆಡಳಿತ ಮಂಡಳಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ತೋರಿಸುವುದಿಲ್ಲ, ಹೀಗಾಗಿ ವಿದ್ಯಾರ್ಥಿಗಳಿಗೆ ಯಾವ ಯಾವ ಕಾಲೇಜಿನಲ್ಲಿ ಎಷ್ಟೆಷ್ಟು ಸೀಟು ಖಾಲಿ ಇದೆ ಎಂಬುದು ತಿಳಿಯುತ್ತಿಲ್ಲ. ಕಾಲೇಜಿನ ಕಟ್ ಆಫ್ ತಿಳಿಯದ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಕೋರ್ಸ್ ಮತ್ತು ಕಾಲೇಜನ್ನು ಆಯ್ದುಕೊಳ್ಳುವುದು ಬಹಳ ಕಷ್ಟವಾಗುತ್ತದೆ. ಇದರಿಂದ ಸಾವಿರಾರು ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಪ್ರತಿಷ್ಠಿತ ಕಾಲೇಜುಗಳಲ್ಲಿ ಅಥವಾ ತಮ್ಮಿಷ್ಟದ ಕಾಲೇಜುಗಳಲ್ಲಿ ಮುಂದುವರಿಸಲಾಗುವುದಿಲ್ಲ. ಈ ಪ್ರಕ್ರಿಯೆಯಲ್ಲಿನ ಲೋಪದೋಷ ಪ್ರವೇಶಾತಿಯಲ್ಲಿ ಪಾರದರ್ಶಕತೆಯ ಕೊರತೆಯನ್ನು ತೋರಿಸುತ್ತದೆ, ಎಬಿವಿಪಿ, ಈ ಹಿಂದೆ ಇದರ ಕುರಿತಾಗಿ ಪ್ರಾಧಿಕಾರದ ಗಮನಕ್ಕೆ ತಂದಿರುತ್ತದೆ. ಆದರೆ ಪರೀಕ್ಷಾ ಪ್ರಾಧಿಕಾರ ಜಾಲತಾಣಗಳಲ್ಲಿ ಎರಡನೇ ಸುತ್ತಿನ ಫಲಿತಾಂಶವನ್ನು ನೀಡುತ್ತಿಲ್ಲ.

ಆದ್ದರಿಂದ ಈ ವರ್ಷ ನಡೆದಂತಹ DET ಮತ್ತು PGCET ಯ ಪ್ರವೇಶಾತಿ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕತೆಯಿಂದ ನಡೆಸುವಂತೆ ಹಾಗೂ ಎರಡು ಸುತ್ತಿನ ಕಟ್ ಆಫ್ ಫಲಿತಾಂಶವನ್ನು ಬಿಡುಗಡೆ ಮಾಡಿ ಮೂರನೇ ಸುತ್ತನ್ನು (Casual Round) ನ್ನು ನಡೆಸಿ ಪ್ರಾಧಿಕಾರದ ವೆಬ್ ಸೈಟ್‌ನಲ್ಲಿ ಪ್ರಕಟಿಸುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಆಗ್ರಹಿಸಿದೆ.

ಈ ಸಮಯದಲ್ಲಿ ಪ್ರಾಂತ ಕಾರ್ಯದರ್ಶಿ ಮಣಿಕಂಠ ಕಳಸ – ನಗರ ಕಾರ್ಯದರ್ಶಿ ಸುಶೀಲ್ ಇಟಗಿ, ಮೌನೇಶಗೌಡ, ಶಿವು, ಕಿರಣ, ಪ್ರಜ್ವಲ್, ಪುಷ್ಪಾ, ಜ್ಯೋತಿ, ಅಮೃತಾ, ಅನುರಾಧಾ ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button