BREAKING NEWSCITY CRIME NEWSTWINCITY

ಎಲ್ ಅ್ಯಂಡ್ ಟಿ ಸಿಬ್ಬಂದಿ ಮೇಲೆ ಹಲ್ಲೆ : ಪಾಲಿಕೆ ಸದಸ್ಯ ಮಾಡಿದ್ದೇನು?

POWER CITYNEWS!

POWER CITYNEWS: hubballi

ಹುಬ್ಬಳ್ಳಿ : ಕ್ಷುಲ್ಲಕ ಕಾರಣಕ್ಕೆ ಯುವಕನೊರ್ವನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಯೊಡ್ಡಿದ ಘಟನೆ ಹುಬ್ಬಳ್ಳಿಯ ಸೋನಿಯಾ ಗಾಂಧಿನಗರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಹಲ್ಲೆಗೊಳಗಾದ ಯುವಕನನ್ನು ಯಲ್ಲಪ್ಪ ಕನಕನ್ನವರ ಎಂದು ಗುರುತಿಸಲಾಗಿದೆ. ಖಾಸಗಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಈತ 27/2/2024ರಂದು ಬೆಳಗಿನ 3ರ ಸಮಯದಲ್ಲಿ ಸೊನಿಯಾಗಾಂಧಿನಗರ ಪ್ರದೇಶದ ನೀರಿನ ವಾಲ್ ಬಂದ ಮಾಡಲು ತೆರಳಲು ಪರಿಚಯಸ್ಥನ ರಿಕ್ಷಾ ಡ್ರೈವರ್ ಸಹಾಯದಿಂದ ರಿಕ್ಷಾ ಭಾಡಿಗೆ ಪಡೆದು ಪುನಃ ವಾಪಸ್ ಆಗಿದ್ದಾನೆ. ಇ ವೇಳೆ ಭಾಡಿಗೆ ಹಣವನ್ನು ತುಸು ಹೊತ್ತಿನ ನಂತರ ನೀಡುವುದಾಗಿ ಯಲ್ಲಪ್ಪ ತಿಳಿಸಿದ್ದನೆಂದು ಹೇಳಿದ್ದಾರೆ. ಇ ವೇಳೆಗೆ ಫಾರುಕ್ ಎಂಬ ಯುವಕ ಯಲ್ಲಪ್ಪನೊಂದಿಗೆ ಕ್ಯಾತೆ ತೆಗೆದು ಯಲ್ಲಪ್ಪನನ್ನು ಥಳಿಸಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ.

ಆದರೆ ಘಟನೆಗೆ ಸಂಬಂಧಿಸಿದಂತೆ ಸಂಭಂದಪಟ್ಟ ಪೊಲಿಸ್ ಠಾಣೆಯಲ್ಲಿ ಯಾವುದೆ ದೂರುಗಳು ದಾಖಲಾಗಿಲ್ಲ.ಆದರೆ ಸ್ಥಳೀಯ ಪಾಲಿಕೆ ಸದಸ್ಯ ಎರಡು ಕಡೆಯವರಿಗೂ ಬುದ್ದಿ ಹೇಳಿ ಘಟನೆ ಮರುಕಳಿಸದಂತೆ ಪಂಚಾಯ್ತಿ ಮಾಡಿದ್ದಾರೆ ಎನ್ನಲಾಗಿದೆ.

Related Articles

Leave a Reply

Your email address will not be published. Required fields are marked *

Back to top button