BREAKING NEWSTWINCITY

ಅಗಲಿದ ಅಭಿಮಾನಿಗಳ ಕಾಣಲು ಬಂದ : ಯಶ್!

Rocking star yash!

POWER CITYNEWS: LAKSHMESHWAR

ಗದಗ /ಲಕ್ಷ್ಮೇಶ್ವರ: ರಾಕಿಂಗ್‌ ಸ್ಟಾರ್‌ ಯಶ್ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಆದರೆ ಯಶ್‌ ಬರ್ತ್‌ಡೇ ದಿನವೇ ದುರ್ಘಟನೆಯೊಂದು ಜರುಗಿದೆ. ಸ್ಯಾಂಡಲ್‌ವುಡ್ ಸುಲ್ತಾನನ ಹುಟ್ಟು ಹಬ್ಬದ ಆಚರಣೆಗೆಂದು 25ಅಡಿ ಎತ್ತರದ ಕಟೌಟ್ ನಿಲ್ಲಿಸುವ ಭರದಲ್ಲಿ ವಿದ್ಯುತ್ ತಂತಿಗೆ ಕಟೌಟ್ ಲೋಹ ತಗುಲಿ ಅನಾಹುತ ಸಂಭವಿಸಿದ್ದರ ಪರಿಣಾಮ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದರೆ ನಾಲ್ವರು ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿದ್ದಾರೆ.

ಘಟನೆಯ ಸುದ್ದಿ ಮಾಧ್ಯಮ ಗಳಿಂದ ತಿಳಿಯುತ್ತಿದ್ದ ಹಾಗೆಯೇ ಮಮ್ಮಲ ಮರುಗಿದ ರಾಕಿಂಗ್ ಸ್ಟಾರ್‌ ಯಶ್ ಪ್ರಾಣ ಕಳೆದುಕೊಂಡ ತಮ್ಮ ಅಭಿಮಾನಿಗಳನ್ನು ಕಾಣಲು ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಿ ಅಲ್ಲಿಂದ ವಾಹನದ ಮೂಲಕ ಲಕ್ಷ್ಮೇಶ್ವರದ ಸೂರಣಗಿ ಗ್ರಾಮದಲ್ಲಿನ ಅಗಲಿದ ಅಭಿಮಾನಿಗಳ ಪಾರ್ಥಿವ ಶರೀರಕ್ಕೆ ನಮಸ್ಕರಿಸಿ ಕುಟುಂಬಸ್ಥರಿಗೆ ಸಾಂತ್ವನ ನೀಡಿದ್ದಾರೆ.

ತಮ್ಮ ಅಭಿಮಾನಿಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವ ನಟ ಯಶ್ ಅಗಲಿದ ಅಭಿಮಾನಿಗಳನ್ನ ಕಂಡು ಮೂಕವಿಸ್ಮಿತರಾಗಿದ್ದಾರೆ.ಆದರೆ “ಅಗಲಿದ ಅಭಿಮಾನಿಗಳ ಅಂತಿಮ ದರ್ಶನಕ್ಕೆ ಯಶ್ ಬರ್ತಾರಾ” ಎಂದು ಪ್ರಶ್ನಾರ್ಥಕ ಚಿನ್ಹೆ ಪಕಟಿಸಿದ್ದ ಪವರ್ ಸಿಟಿ ನ್ಯೂಸ್ ಊಹೆಯಂತೆ ಅಗಲಿದ ಅಭಿಮಾನಿಗಳ ಅಂತಿಮ ದರ್ಶನ ಪಡೆದಿದ್ದು ಕನ್ನಡಿಗರ ಭಾವನೆಗಳಿಗೆ ಮತ್ತಷ್ಟು ಸಮೀಪವಾಗಿದ್ದಾರೆ ಯಶ್.ಆದರೆ ಇಂತಹ ದುರ್ಘಟನೆಗೆ ಬರುವಂತೆ ಮಾಡಿದ ಇಂತಹ ಸಂದರ್ಭದ ಮತ್ತೊಮ್ಮೆ ಮರುಕಳಿಸದಿರಲಿ ಎಂದು ಆಶಿಸುತ್ತದೆ.

Related Articles

Leave a Reply

Your email address will not be published. Required fields are marked *

Back to top button