ಸ್ಥಳೀಯ ಸುದ್ದಿ
ಕಿತ್ತೂರಿನಲ್ಲಿ ಶಾಸಕ ವಿನಯ ಕುಲಕರ್ಣಿ ಅವರಿಂದ ಕ್ಷೇತ್ರದ ಜನರ ಅಹವಾಲು ಸ್ವೀಕಾರ
![](https://www.powercity.news/wp-content/uploads/2023/07/20230709_164812-scaled.jpg)
ಕಿತ್ತೂರು
ಕಿತ್ತೂರಿನಲ್ಲಿ ಶಾಸಕ ವಿನಯ ಕುಲಕರ್ಣಿ ಅವರು, ಕ್ಷೇತ್ರದ ಜನರ ಅಹವಾಲು ಸ್ವೀಕಾರ ಮಾಡಿದ್ರು.
ಜೆಜೆಎಂ ಕಾಮಗಾರಿ ಧಾರವಾಡ ಗ್ರಾಮೀಣ ಭಾಗದಲ್ಲಿ ಅವೈಜ್ಞಾನಿಕ ರೀತಿಯಿಂದ ಕೂಡಿದೆ. 2 ವರೆ ಪೂಟ ರಸ್ತೆ ತೆಗ್ಗು ತಗೆದು ಪೈಪಲೈನ್ ಹಾಕುವ ಬದಲು ಕೆವಲ 1 ಪೂಟ್ ಪೈಪ್ ಹಾಕಿ ರಸ್ತೆ ಹಾಳು ಮಾಡುತ್ತಿದ್ದಾರೆ. ಈ ಬಗ್ಗೆ ಗುತ್ತಿಗೆದಾರರ ಸಭೆ ಕರೆಯಲಾಗುವುದು ಎಂದರು.
![](https://powercity.news/wp-content/uploads/2023/07/Screenshot_20230709_184905_Google.jpg)
![](https://powercity.news/wp-content/uploads/2023/07/Screenshot_20230709_184959_Google.jpg)
ಅಮರನಾಥ ಯಾತ್ರೆ ವೇಳೆ ಸಿಲುಕಿಕೊಂಡಿರುವ ಧಾರವಾಡ ಕ್ಷೇತ್ರದ ಕರಡಿಗುಡ್ಡ ಗ್ರಾಮದ ಯುವಕರ ರಕ್ಷಣೆಗೆ ಸಿಎಂ ಸಿದ್ದರಾಮಯ್ಯಾ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಜೊತೆಗೆ ಮಾತನಾಡಿದ್ದು, ಇವರಿಗೆ ಸುರಕ್ಷಿತವಾಗಿ ಇಂದು ಸಂಜೆ ರಾಜ್ಯಕ್ಕೆ ಹೆಲಿಕ್ಯಾಪ್ಟರ್ ಮೂಲಕ ಕರೆ ತರಲಾಗುವುದು ಎಂದರು.
![](https://powercity.news/wp-content/uploads/2023/07/Screenshot_20230709_161214_WhatsApp.jpg)
![](https://powercity.news/wp-content/uploads/2023/07/Screenshot_20230709_184952_Google.jpg)
ಅಲ್ಲದೇ ಕ್ಷೇತ್ರದಲ್ಲಿ ಪಿಡಬ್ಲೂಡಿ ರಸ್ತೆಗಳ ಅಭಿವೃದ್ಧಿಗೆ ಈಗಾಗಲೇ ಸಭೆ ಕರೆದು ಅಧಿಕಾರಿಗಳೊಂದಿಗೆ ಮಾಹಿತಿ ಪಡೆದಿದ್ದೇನೆ. ಕ್ಷೇತ್ರದಲ್ಲಿ ಯಾವುದೇ ಸಮಸ್ಯೆಗಳು ಆಗದಂತೆ ಶಾಸಕನಾಗಿ ನಾನು ಪ್ರಾಮಾಣಿಕತೆಯಿಂದ ಕೆಲಸ ಮಾಡುವೆ ಎಂದರು.