ಕೇದಾರನಾಥ ಮಧ್ಯಮಹೇಶ್ವರ ಉತ್ಸವ ಮೂರ್ತಿ ಡೋಲಿ ಪ್ರಸ್ಥಾನ…
![](https://www.powercity.news/wp-content/uploads/2021/11/IMG-20211122-WA0071.jpg)
ಉತ್ತರಾಖಂಡ
ಕೇದಾರನಾಥ ದೇವಸ್ಥಾನದ ಮಧ್ಯಮಹೇಶ್ವರ ದೇವಸ್ಥಾನ ಇದು.
ಎರಡನೇ ಕೇದಾರನಾಥ ಎಂದು ಕರೆಯುವುದುಂಟು, ಬಹಳ ಶಕ್ತಿ ಸ್ಥಳವಾದ ಈ ದೇವಸ್ಥಾನ ಕೇದಾರನಾಥ ದೇವಸ್ಥಾನದಲ್ಲಿಯೇ ಬರುವುದರಿಂದ ಅವರೇ ಆಡಳಿತ ಮಂಡಳಿ ಕೂಡ ಇದೆ.
ಮಧ್ಯ ಮಹೇಶ್ವರ ದೇವಸ್ಥಾನದ
ಆಚಾರವೇ ತನ್ನ ಮಹದಾಭರಣವಾಗಿಸಿಕೊಂಡು, ಭಕ್ತರ ಬಯಕೆಗಳನ್ನು ಈಡೇರಿಸುವ, ದೇವತ್ವ ದೀಪಿಸುವ ಪರಂಜ್ಯೋತಿ ಸ್ವರೂಪನಾದ ದೈವ ಮಧ್ಯ ಮಹೇಶ್ವರನಾಗಿದ್ದಾನೆ.
![](http://powercity.news/wp-content/uploads/2021/11/IMG-20211122-WA0070.jpg)
ದ್ವಿತೀಯ ಕೇದಾರನಾಥನೆಂದು ಪ್ರಸಿದ್ಧನಾದ ಮಧ್ಯಮಹೇಶ್ವರ ಮಂದಿರ ಶೀತಕಾಲ ಪ್ರಯುಕ್ತ ಇಂದು ಬೆಳಗಿನ 8-30 ಕ್ಕೆ ಬಾಗಿಲಾಕಿ ಉತ್ಸವ ಮೂರ್ತಿಯ ಡೋಲಿ ಪ್ರಸ್ಥಾನವಾಯಿತು.
ಇಂದು ಗೊಂಡಾರಕ್ಕೆ ದಯಮಾಡಿಸಿ ಅಲ್ಲಿಯೇ ಮೊಕ್ಕಾಂ ಮಾಡಲಿದೆ.
ನಾಳೆ ಪ್ರಾಥಃಕಾಲಾದಲ್ಲಿ ಅಲ್ಲಿಂದ ಪ್ರಯಾಣಿಸಿ ರಾಶಿ ಮೊಕ್ಕಾಂ ಮಾಡುವುದು.ನಾಡಿದ್ದು ರಾಶಿಯಿಂದ ಗಿರಿಯಾ ಎನ್ನುವ ಗ್ರಾಮದಲ್ಲಿ ಮೊಕ್ಕಾಂ ಮಾಡುವುದು.
_25 ಕ್ಕೆ ಊಖೀಮಠದಲ್ಲಿರುವ ವೈರಾಗ್ಯ ಸಿಂಹಾಸನ ಮಹಾ ಸಂಸ್ಥಾನ ಪೀಠಕ್ಕೆ ಭವ್ಯವಾದ ಮೇರವಣಿಗೆ ಮೂಲಕ ಬರಮಾಡಿಕೊಳ್ಳಲಾಗುವುದು ಎಂದು ವ್ಯವಸ್ಥಾಪಕರು ತಿಳಿಸಿರುವರು.