![](https://www.powercity.news/wp-content/uploads/2023/12/eiLHNMI58783-780x470.jpg)
POWERCITY NEWS : ಧಾರವಾಢ
:ವಿದ್ಯಾಕಾಶಿ ಧಾರವಾಡದಲ್ಲಿ ಜನನಿ ಬಿಡ ಪ್ರದೇಶದಲ್ಲಿ ನಿರ್ಭಯವಾಗಿ ನಡುರಸ್ತೆಯಲ್ಲಿ ಮಾರಕಾಸ್ತ್ರ ಸಜ್ಜಿತ ತಂಡವೊಂದು ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ.
ನಗರದ ಕೊಪ್ಪದ ಕೇರಿ ಬಳಿಯ ಶಿವಾಲಯ ದೇವಸ್ಥಾನದ ಎದುರು ಘಟನೆ ನಡೆದಿದೆ.
![](https://www.powercity.news/wp-content/uploads/2023/12/Screenshot_2023-12-04-08-13-45-84_7352322957d4404136654ef4adb64504-1024x473.jpg)
ಕೊಲೆಗಿಡಾದ ವ್ಯಕ್ತಿಯನ್ನು ನಿಂಗಪ್ಪ ಹಡಪದ(60).ಮೂಲತಃ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ನಿವಾಸಿಯಾಗಿದ್ದರು ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅವಳಿನಗರದ ಆಯುಕ್ತರು ಘಟನೆಯ ಕುರಿತು ಸ್ಥಳ ಪರಿಸಿಲಿಸಿ ಕೃತ್ಯವೆಸಗಿದ ಆರೋಪಿಗಳ ಪತ್ತೆಗಾಗಿ ಕಾನೂನು ಕ್ರಮ ಜರುಗಿಸಿದ್ದಾರೆ.
![](https://www.powercity.news/wp-content/uploads/2023/12/Screenshot_2023-12-04-08-13-07-11_7352322957d4404136654ef4adb64504-1024x473.jpg)
ಇತ್ತೀಚೆಗಷ್ಟೆ ಕೊಲೆಯಾದ ವ್ಯಕ್ತಿ ಹಾಗೂ ಆತನ ಸಹೋದರರ ನಡುವೆ ಆಸ್ತಿ ವಿಚಾರವಾಗಿ ವೈಮನಸ್ಸು ಮೂಡಿದ್ದರಿಂದ ಹೆಬ್ಬಳ್ಳಿಯಿಂದ ಧಾರವಾಡಕ್ಕೆ ಬಂದು ನೆಲೆಸಿದ್ದರು ಎನ್ನಲಾಗಿದೆ. ಆದರೆ ನಿನ್ನೆ ನಡೆದ ನಿಂಗಪ್ಪ ಹಡಪದನ ಕೊಲೆಗೆ ಆಸ್ತಿ ವಿವಾದದ ಹಿನ್ನೆಲೆಯೆ ಕಾರಣವಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.
![](https://www.powercity.news/wp-content/uploads/2023/12/eiLHNMI58783.jpg)