ಸ್ಥಳೀಯ ಸುದ್ದಿ
ಕೌಟುಂಬಿಕ ಕಲಹ ಅಪ್ರಾಪ್ತ ಮಗನಿಂದಲೇ ತಂದೆ ಹತ್ಯೆ
![](https://www.powercity.news/wp-content/uploads/2022/04/IMG_20220427_222434.jpg)
ಧಾರವಾಡ
ಅತಿಯಾದ ಕುಡಿತಕ್ಕೆ ಒಳಗಾಗಿದ್ದ ಮನೆಯ ಯಜಮಾನ ಕೌಟುಂಬಿಕ ಕಲಹದ ಘಟನೆಯಲ್ಲಿ ಹೆತ್ತ ಮಗನಿಂದಲೇ ಹತ್ಯೆಯಾಗಿದ್ದಾನೆ.
![](http://powercity.news/wp-content/uploads/2022/04/InShot_20220427_221232179-1.jpg)
ಧಾರವಾಡ ತಾಲೂಕಿನ ಮಂಗಳಗಟ್ಟಿ ಗ್ರಾಮದಲ್ಲಿ ಪುಂಡಲೀಕ ಒಂಟಿಗಡದ ಎನ್ನುವ ವ್ಯಕ್ತಿ ಕೊಲೆಯಾಗಿ ಹೋಗಿದ್ದಾನೆ.
![](http://powercity.news/wp-content/uploads/2022/04/IMG_20220427_221537.jpg)
ಕುಡಿದ ಮತ್ತಿನಲ್ಲಿದ್ದ ಪುಂಡಲೀಕ ಹೆಂಡತಿ- ಮಗ ಹಾಗೂ ತಾಯಿಗೆ ಕೊಡಲಿ ಹಿಡಿದು ಹೊಡೆಯಲು ಹೋಗಿದ್ದ ಸಂದರ್ಭದಲ್ಲಿ ಜಗಳ ಬಿಡಿಸಲು ಬಂದ ಅಪ್ರಾಪ್ತ ಮಗ ಅದೇ ಕೊಡಲಿಯಿಂದ ಹೊಡೆದು ಅಪ್ಪನನ್ನು ಕೊಲೆ ಮಾಡಿದ್ದಾನೆ.
ಈ ಬಗ್ಗೆ ಗರಗ ಪೊಲೀಸ್ ಠಾಣೆಯಲ್ಲಿ ತಂದೆಯ ಕೊಲೆ ಮಾಡಿದ ಅಪ್ರಾಪ್ತ ಹುಡುಗನ ಮೇಲೆ ಪ್ರಕರಣ ದಾಖಲಾಗಿದೆ.