Uncategorizedರಾಜಕೀಯ
ನಗರ ಸಭೆ ಚುಣಾವಣೆಗೆ ಗೂಳಪ್ಪ ಮೂಶಿಗೇರಿ ನಾಮಪತ್ರ ಸಲ್ಲಿಕೆ : ಅನೀಲ್ ಮೆಣಸಿನಕಾಯಿ ಸಾಥ್!
![](https://www.powercity.news/wp-content/uploads/2021/12/IMG-20211215-WA0397.jpg)
ನಗರಸಭೆ ಚುನಾವಣೆ ಕಾವು: ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಮುಶಿಗೇರಿ
ಗದಗ: ಗದಗ-ಬೇಟಗೇರಿ ನಗರಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಬಿಜೆಪಿ ಅಭ್ಯರ್ಥಿ ಗೂಳಪ್ಪ ಮುಶಿಗೇರಿಯವರು ಅಪಾರ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
![](http://powercity.news/wp-content/uploads/2021/12/vijaya-karnataka.jpg)
ಗದಗ ಬೆಟಗೇರಿ ನಗರಸಭೆಯ 13ನೇ ವಾರ್ಡಿನ ಅಭ್ಯರ್ಥಿಯಾದ ಗುಳಪ್ಪ ಮುಶಿಗೇರಿಯವರು ಅದ್ದೂರಿ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಕೆಯ ಸಂಧರ್ಭದಲ್ಲಿ ಬಿಜೆಪಿ ಮುಖಂಡರಾದ ಅನಿಲ್ ಮೆಣಸಿಕಾಯಿ ಶ್ರೀಪತಿ ಉಡುಪಿ ರಾಜು ಕುರುಡಗಿ ಹಾಗೂ ಅಪಾರ ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರು ಈ ಮೆರವಣಿಗೆಯಲ್ಲಿ ಪಾಲ್ಗೊಂಡು ಮೂಶಿಗೇರಿಯವರಿಗೆ ಬೆಂಬಲ ನೀಡಿದರು.
![](https://www.powercity.news/wp-content/uploads/2021/12/IMG-20211215-WA0397-850x560.jpg)