ಸ್ಥಳೀಯ ಸುದ್ದಿ
ಶನಿವಾರದಂದು ಗುರುವಂದನಾ ಕಾರ್ಯಕ್ರಮ
![](https://www.powercity.news/wp-content/uploads/2023/08/InShot_20230810_172317194.jpg)
ಧಾರವಾಡ
ಧಾರವಾಡ ತಾಲೂಕಿನ ಯಾದವಾಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 2000-2001ನೇ ಸಾಲಿನ 7ನೇ ತರಗತಿ ವಿದ್ಯಾರ್ಥಿಗಳಿಂದ ಆ. 12ರಂದು ಶನಿವಾರ ಬೆಳಗ್ಗೆ 11ಕ್ಕೆ ಶಾಲೆಯ ಆವರಣದಲ್ಲಿ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
![](https://powercity.news/wp-content/uploads/2023/08/IMG-20230810-WA0051.jpg)
![](https://powercity.news/wp-content/uploads/2023/08/IMG-20230810-WA0048.jpg)
ಯಾದವಾಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಭಾವತಿ ಪುರೋಹಿತ(ಜೋಶಿ) ಹಾಗೂ ಜಿ.ಎನ್. ಅಕ್ಕಿ ಅವರು ಹಳೇ ವಿದ್ಯಾರ್ಥಿಗಳಿಂದ ಗುರುವಂದನೆ ಸ್ವೀಕರಿಸಲಿದ್ದಾರೆ.
![](https://powercity.news/wp-content/uploads/2023/08/Screenshot_20230810_173156_WhatsApp.jpg)
![](https://powercity.news/wp-content/uploads/2023/08/InShot_20230810_172317194-1.jpg)
ಕಾರ್ಯಕ್ರಮವನ್ನು ಗ್ರಾಪಂ ಸದಸ್ಯ ಶಿವಾನಂದ ಬೆಂಡಿಗೇರಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಗ್ರಾಪಂ ಅಧ್ಯಕ್ಷ ಗಂಗಾಧರ ಮುಮ್ಮಿಗಟ್ಟಿ, ಉಪಾಧ್ಯಕ್ಷೆ ಲಕ್ಷ್ಮೀ ಹುಲಮನಿ, ಪಿಡಿಓ ಆರ್.ಜೆ. ಚಲವಾದಿ, ಹನುಮನಕೊಪ್ಪ ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್.ಎಂ. ಬೊಂಗಳೆ ಪಾಲ್ಗೊಳ್ಳಲಿದ್ದಾರೆ. ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಎಸ್.ಎಲ್. ಜಡಿಯವರ ಅಧ್ಯಕ್ಷತೆ ವಹಿಸುವರು. ಗ್ರಾಮದ ಗದಿಗಯ್ಯ ಹಿರೇಮಠ ಸಾನಿಧ್ಯ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
![](https://powercity.news/wp-content/uploads/2023/08/IMG-20230810-WA0050.jpg)