ಸ್ಥಳೀಯ ಸುದ್ದಿ
ಪತ್ರಕರ್ತ ಶ್ರೀಕಾಂತ್ ಬೇಟಗೇರಿ ತಾಯಿ ನಿಧನ
![](https://www.powercity.news/wp-content/uploads/2022/11/IMG-20221118-WA0001.jpg)
ಧಾರವಾಡ
ಧಾರವಾಡ ಜಿಲ್ಲೆಯ ಹಿರಿಯ ಪತ್ರಕರ್ತ ಶ್ರೀಕಾಂತ ಬೆಟಗೇರಿಯವರ ತಾಯಿ ಶ್ರೀಮತಿ ಕಸ್ತೂರಿ ಬೆಟಗೇರಿಯವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
![](https://powercity.news/wp-content/uploads/2022/11/IMG-20221118-WA0001-1.jpg)
ಮೂಲತಂ ನವಲಗುಂದ ತಾಲೂಕಿನ ಗುಮ್ಮಗೊಳ ಗ್ರಾಮದ ನಿವಾಸಿಯಾಗಿರುವ ಶ್ರೀಕಾಂತ್ ಅವರ ತಾಯಿ ಮಗನ ಜೋತೆಗೆ ಧಾರವಾಡದಲ್ಲಿ ನೆಲೆಸಿದ್ದರು.
ಜೆಎಸ್ಎಸ್ ಕಾಲೇಜಿನಲ್ಲಿ ಮಗ ಶ್ರೀಕಾಂತ್ ಹೊಸದಾಗಿ ಆರಂಭಿಸಿದ್ದ ಸಿರಿಧಾನ್ಯ ಉತ್ಪನ್ನಗಳ ಅಂಗಡಿಯ ಉದ್ಯಮಕ್ಕೆ ಬೆಂಬಲ ಕೊಡುತ್ತಾ, ಮಗನ ಬೆಳೆವಣಿಗೆಯಲ್ಲಿ ಖುಷಿ ಕಂಡವರು.
ದಿಢೀರನೆ ತಂದ ಹೃದಯಾಘಾತದ ಆಘಾತ ಪತ್ರಕರ್ತನ ಕುಟುಂಬಕ್ಕೆ ಸಾಕಷ್ಟು ನೋವು ತಂದಿದ್ದು, ಆ ಭಗವಂತ ಅವರ ಆತ್ಮಕ್ಕೆ ಶಾಂತಿನೀಡಿ, ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಡಲಿ.
ಮೃತರ ಅಂತ್ಯಕ್ರಿಯೆ ಗುಮ್ಮಗೊಳ ಗ್ರಾಮದಲ್ಲಿ ಇಂದು ಮಧ್ಯಾಹ್ನ ನಡೆಯಲಿದೆ.