ಸ್ಥಳೀಯ ಸುದ್ದಿ
ಬಾಂಬೆ ರೆಸ್ಟೋರೆಂಟಗೆ ಕೇಂದ್ರ ಸಚಿವ ಭೇಟಿ
![](https://www.powercity.news/wp-content/uploads/2022/08/IMG-20220813-WA0021.jpg)
ಧಾರವಾಡ
ಧಾರವಾಡಕ್ಕೆ ಆಗಮಿಸಿದ ಕೇಂದ್ರ ಕಲ್ಲಿದ್ದಲು, ಗಣಿ ಹಾಗೂ ಸಂಸದೀಯ ಸಚಿವರಾದ ಪ್ರಹ್ಲಾದ ಜೋಷಿ, ಇಂದು ಕೆ.ಸಿ.ಸಿ ಬ್ಯಾಂಕ್ ನ ಕಾರ್ಯಕಾರಿಣಿ ನಿಮಿತ್ತ ಆಗಮಿಸಿದ ಸಂದರ್ಭದಲ್ಲಿ, ಧಾರವಾಡದ ನಗರದ ಪ್ರತಿಷ್ಠಿತ, 50 ವರ್ಷಗಳ ಹಳೆಯದಾದ, ವಿವಿಧ ರೀತಿಯ ತಿಂಡಿ ತಿನಿಸುಗಳನ್ನು ಮಾಡುವಲ್ಲಿ ಹೆಸರಾದ ಬಾಂಬೆ ರೆಸ್ಟೋರೆಂಟ ಗೆ ಭೇಟಿ ನೀಡಿ, ತುಪ್ಪದ ದೋಸೆ ಉಪಹಾರ ಸೇವಿಸಿದರು.
![](https://powercity.news/wp-content/uploads/2022/08/IMG-20220813-WA0023.jpg)
ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ, ಶಾಸಕರಾದ ಅಮೃತ ದೇಸಾಯಿ, ಅರವಿಂದ ಬೆಲ್ಲದ, ಜಿಲ್ಲಾಧ್ಯಕ್ಷರಾದ ಸಂಜಯ ಕಪಟಕರ, ತವನಪ್ಪ ಅಷ್ಟಗ, ಟಿ.ಎಸ್. ಪಾಟೀಲ, ವಿಜಯಾನಂದ ಶೆಟ್ಟಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಬಾಂಬೆ ರೆಸ್ಟೋರೆಂಟನ ಮಾಲೀಕರು, ಹಿರಿಯರಾದ ಶ್ರೀ ರಾಮಕೃಷ್ಣ ಬೆಡಗಬೆಟ್ಟ ರವರು ಇತ್ತೀಚಿಗೆ ನಿಧನರಾದ ಹಿನ್ನೆಲೆಯಲ್ಲಿ, ಅವರ ಕುಟುಂಬಸ್ಥರಿಗೆ ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿ ಅವರು ಸಾಂತ್ವನ ಹೇಳಿದರು.
![](https://powercity.news/wp-content/uploads/2022/08/IMG-20220813-WA0022.jpg)