ಧಾರವಾಡ
ಧಾರವಾಡದಲ್ಲಿ ಯಶಸ್ವಿಯಾದ ಅಖಂಡ ಹಿಂದೂ ಬೃಹತ್ ಸಮಾವೇಶ
![](https://www.powercity.news/wp-content/uploads/2022/02/IMG-20220227-WA0017.jpg)
ಧಾರವಾಡ
ಭಜರಂಗದಳದ ಹಿಂದೂ ಕಾರ್ಯಕರ್ತ ದಿ. ಹರ್ಷ ಅವರ ಹತ್ಯೆಯನ್ನು ಖಂಡಿಸಿ ಇಂದು ಧಾರವಾಡದಲ್ಲಿ ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ, ಅಖಂಡ ಹಿಂದೂ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.
ನಗರದ ಕಲಾಭವನದ ಮೈದಾನದಲ್ಲಿ ಈ ಸಮಾವೇಶ ನಡೆಯಿತು.
ಈ ಸಂದರ್ಭದಲ್ಲಿ ಹರ್ಷ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
![](http://powercity.news/wp-content/uploads/2022/02/IMG-20220227-WA0016.jpg)
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಮಾವೇಶ ಉದ್ಘಾಟನೆ ಮಾಡಿದ್ರು.
![](http://powercity.news/wp-content/uploads/2022/02/IMG-20220227-WA0015.jpg)
ಕಾರ್ಯಕ್ರಮದಲ್ಲಿ ಶಾಸಕ ಶ್ರೀ ಅಮೃತ್ ದೇಸಾಯಿ, ಶ್ರೀ ಪರಮಾತ್ಮನಂದ ಸ್ವಾಮೀಜಿ, ಶ್ರೀ ಬಸವರಾಜ್ ಕುಂದಗೋಳಮಠ, ಶ್ರೀ ಸಂಜಯ ಕಪಟಕರ, ಶ್ರೀ ಈರೇಶ ಅಂಚಟಗೇರಿ, ಮಾಜಿ ಶಾಸಕಿ ಶ್ರೀಮತಿ ಸೀಮಾ ಮಸೂತಿ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಹಿಂದೂ ಅಭಿಮಾನಿಗಳು ಭಾಗವಹಿಸಿದ್ದರು.