420 ಕೇಸ್ ರಾಘವೇಂದ್ರ ಕಟ್ಟಿ ಅರೆಸ್ಟ
![](https://www.powercity.news/wp-content/uploads/2022/04/IMG-20220402-WA0000.jpg)
ಧಾರವಾಡ
ಸರ್ಕಾರಿ ನೌಕರಿ ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ ವಂಚಿಸಿದ್ದ ಎಸ್ ಜಿ ಎಸ್ ಎಸ್ ಹೆಚ್ ಆರ್ ಕನ್ಸಟೆನ್ಸಿಯ ರಾಘವೇಂದ್ರ ಕಟ್ಟಿ ವಿರುದ್ದ 420 ಕೇಸ್…..! ದಾಖಲಾಗಿದ್ದರ ಹಿನ್ನೆಲೆಯಲ್ಲಿ ಉಪನಗರ ಠಾಣೆ ಪೊಲೀಸರು ತಲೆಮರೆಸಿಕೊಂಡಿದ್ದ ರಾಘವೇಂದ್ರ ಕಟ್ಟಿಯನ್ನು ಬಂಧಿಸಿದ್ದಾರೆ.
![](http://powercity.news/wp-content/uploads/2022/04/IMG_20211122_213447.jpg)
![](http://powercity.news/wp-content/uploads/2022/04/IMG_20220402_104239.jpg)
ರಾಘವೇಂದ್ರ ಕಟ್ಟಿ ಬಂಧನ ಯಾವಾಗ ಎಂದು ಪವರ್ ಸಿಟಿ ನ್ಯೂಸ್ ಕನ್ನಡ ಸುದ್ದಿ ಪ್ರಕಟ ಮಾಡಿತ್ತು.
ಮೂವರು ವಿದ್ಯಾರ್ಥಿಗಳಿಂದ ೨೨,೬೫,೦೦೦/ ರೂಪಾಯಿ ಪಡೆದು ವಂಚನೆ ದೂರು ದಾಖಲು ಆಗಿತ್ತು.
ಇತ್ತೀಚಿಗೆ ಹೊರ ಜಿಲ್ಲೆಯ ವಿದ್ಯಾರ್ಥಿಗಳು ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕೇಂದ್ರ ಸರ್ಕಾರದ ಎನ್ ಇ ಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಕಾಯ್ದೆ ಹೆಸರಿನಲ್ಲಿ ನಗರದ ಎಸ್ ಜಿ ಎಸ್ ಎಸ್ ಹೆಚ್ ಆರ್ ಕನ್ಸಟೆನ್ಸಿಯ ರಾಘವೇಂದ್ರ ಕಟ್ಟಿ ವಿರುದ್ದ ವಂಚನೆ ಪ್ರಕರಣ ದಾಖಲಾಗಿಸಿದ್ದರು ಅಭ್ಯರ್ಥಿಗಳು.
![](http://powercity.news/wp-content/uploads/2022/04/IMG-20220402-WA0004.jpg)
ಕೇಂದ್ರ ಹಾಗೂ ರಾಜ್ಯ ಸರಕಾರಿ ಹುದ್ದೆಗೆ ಸರಿಸಮಾನದ ಹುದ್ದೆ ನೀಡುವುದಾಗಿ ರಾಘವೇಂದ್ರ ಕಟ್ಟಿ ಹಾಗೂ ಆತನ ಎಜೆಂಟ್ ಶರಣಪ್ಪ ತಿಕೋಟಿಕರ್ ವಿರುದ್ದ 420 ವೋಸ,ವಂಚನೆ ಹಾಗೂ 506 ಬೆದರಿಕೆ ಹಾಕಿರುವ ಪ್ರಕರಣ ದಾಖಲಾಗಿತ್ತು.
ಸಂಸ್ಥೆಯ ಮ್ಯಾನೇಜರ್ ಪೂರ್ಣಿಮಾ ಸೊಪ್ಪಿಮಠ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
![](http://powercity.news/wp-content/uploads/2022/04/IMG-20220402-WA0001.jpg)
ಒಬ್ಬ ವಿದ್ಯಾರ್ಥಿಯಿಂದ 7.10 ಲಕ್ಷ ಹಾಗೂ ಇಬ್ಬರು ವಿದ್ಯಾರ್ಥಿಗಳಿಂದ
ತಲಾ 7.55 ಲಕ್ಷ ಒಟ್ಟು
೨೨,೬೫,೦೦೦/ ರೂಪಾಯಿ ಪಡೆದು ನೌಕರಿ ಕೊಡಿಸದೆ ಹಣವೂ ಮರಳಿಸದೆ ವಂಚನೆ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಸಾಗರ ಶೀಳಿನ ಬ್ಯಾಂಕ್ ಖಾತೆಯಿಂದ ದಿ : ೩೧/೦೩/೨೦೨೧ ಹಾಗೂ ೧೬/೦೪/೨೦೨೧ ರಂದು ಶರಣಪ್ಪ ತಿಕೋಟಿಕರ ಖಾತೆಗೆ ೪,೭೮,೦೦೦ ರೂಪಾಯಿಗಳನ್ನು ಹಾಕಲಾಗಿದೆ.
ಮಲ್ಲಿಕಾರ್ಜುನ ಕೂಡಗಿ ಬ್ಯಾಂಕ್ ಖಾತೆಯಿಂದ ದಿನಾಂಕ : ೨೭/೦೪/೨೦೨೧ ರಂದು ರಾಘವೇಂದ್ರ ಕಟ್ಟಿ ಖಾತೆಗೆ ೨,೦೫,೦೦೦ ರೂಪಾಯಿಗಳನ್ನು ಹಾಕಲಾಗಿದೆ.
ಶಿವರಾಜ ಅವಟಿ ಬ್ಯಾಂಕ್ ಖಾತೆಯಿಂದ ದಿನಾಂಕ : ೨೭/೦೪/೨೦೨೧ ರಂದು ರಾಘವೇಂದ್ರ ಕಟ್ಟಿ ಖಾತೆಗೆ ೧,೯೫,೦೦೦ ರೂಪಾಯಿಗಳನ್ನು ಹಾಕಲಾಗಿದೆ.
ಇನ್ನುಳಿದ ಹಣವನ್ನು ದಿನಾಂಕ : ೨೮/೦೭/೨೦೨೧ ರಂದು ೧೩,೮೭,೦೦೦ ರೂಪಾಯಿಗಳನ್ನು ರಾಘವೇಂದ್ರ ಕಟ್ಟಿ ಆಪ್ತರಾದ ಶರಣಪ್ಪ ತಿಕೋಟಿಕರ, ಪ್ರೇಮಾ ಪ್ರಭಾಕರ ಪುದುರ, ವೀರೇಶ ಪ್ರಭಾಕರ ಪುದುರ, ಸತೀಶ ಹೊಸಮನಿ, ಉಮೇಶ ಕಳಸದ , ನಾಗರಾಜ ಸಾವನೂರ, ಶಶಿ, ಪ್ರಭಾಕರ ಭಜಂತ್ರಿಯವರ ಸಮಕ್ಷಮದಲ್ಲಿ ಉಮೇಶ ಕಳಸದ ಕಚೇರಿಯಲ್ಲಿ ನೀಡಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿತ್ತು.
ಈ ಕುರಿತು ಪ್ರಕರಣ ದಾಖಲಿಸಿಕೊಂಡ ಧಾರವಾಡದ ಉಪನಗರ ಪೊಲೀಸ್ ಠಾಣೆಯ ಪೊಲೀಸರು 420 ಯನ್ನು ಬಂಧಿಸಿದ್ದಾರೆ.
![](http://powercity.news/wp-content/uploads/2022/04/IMG-20220402-WA0000-1.jpg)
ಒಟ್ಟು 4 ಕೇಸನಲ್ಲಿ ಒಂದು ಕೇಸಗೆ ಬಿ.ರಿಪೋರ್ಟ್ ಹಾಕಿದ್ದಾರೆ ಎನ್ನಲಾಗುತ್ತಿದೆ. ಇನ್ನುಳಿದಂತೆ 3 ಕೇಸಗಳಿಗೆ ರಾಘವೇಂದ್ರ ಕಟ್ಟಿ ಹಾಗೂ ಅವರ ತಂಡ ಕಾನುನು ಹೋರಾಟ ನಡೆಸಬೇಕಿದೆ.
ಜನಜಾಗೃತಿ ಸಂಘದ ಅಧ್ಯಕ್ಷರ ಬಸವರಾಜ ಕೊರವರ್ ಅವರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಂತೆ ಆಗಿದೆ.
![](http://powercity.news/wp-content/uploads/2022/04/IMG_20211215_212229.jpg)
ಪವರ್ ಸಿಟಿನ್ಯೂಸ್ ಕನ್ನಡ ಸತ್ಯ ಸದಾಕಾಲ