ಅವಳಿ ನಗರದಲ್ಲಿ ಭೀಮಾ ತೀರದ ಕೊರೆಗಾಂವ್ ವಿಜಯೋತ್ಸವ!
![](https://www.powercity.news/wp-content/uploads/2022/01/IMG-20220101-WA0117.jpg)
ಹುಬ್ಬಳ್ಳಿಯಲ್ಲಿ ದಲಿತಪರ ಮುಖಂಡರಿಂದ ಭೀಮಾ ತೀರದ ಕೊರೆಗಾಂವ್ ವಿಜಯೋತ್ಸವ-ದಿವಸ್ ಆಚರಣೆಯಲ್ಲಿ
ಆರ್ಯ,ಬ್ರಾಹ್ಮಣ
*ಹಠಾವೋ ದೇಶ ಬಚಾವೋ* ಘೋಷಣೆಗಳೊಂದಿಗೆ
ಮಹಾರಾಷ್ಟ್ರದಲ್ಲಿನ ಭೀಮಾ ತೀರದ ಕೊರೆಗಾಂವ ನಲ್ಲಿ ನಡೆದ ಶೋಷಣೆ, ಅಸ್ಪೃಶ್ಯತೆ ಮತ್ತು ಮೇಲು,ಕೀಳು ಗಳ ದೌರ್ಜನ್ಯ ಖಂಡಿಸಿ ಶೊ಼ಷಿತರಪರ 500 ಮಹರ್ ಮತ್ತು 30000 ಪೇಶ್ವೆ ಸೈನಿಕರ ಮಧ್ಯ 01-01-1818 ರಲ್ಲಿ ನಡೆದ 9 ತಾಸುಗಳ ಯುದ್ಧದಲ್ಲಿ ವಿಜಯ ಸಾಧಿಸಿದ ದಲಿತಪರ ಮಹರ್ ಸೈನಿಕರು ಪೇಶ್ವೆ ಆಡಳಿತದಲ್ಲಿ ನಡೆಯುತ್ತಿದ್ದ ಅನ್ಯಾಯ, ಮೇಲೂ, ಕೀಳುಗಳ ವಿರುಧ್ದ ವಿಜಯಸಾದಿಸಿದ ಹಿನ್ನೆಲೆಯಲ್ಲಿ.
![](http://powercity.news/wp-content/uploads/2022/01/file6ybr25pwwlyuv593bcb.jpg)
ಡಾ! ಬಿ ಅರ್ ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಗುರುನಾಥ ಉಳ್ಳಿಕಾಸಿ ನೇತೃತ್ವದಲ್ಲಿ ನಡೆದ ವಿಜಯೋತ್ಸವ ದಿವಸ್ ಆಚರಣೆ ಯನ್ನು ಕರ್ನಾಟಕ ಸಮತಾ ಸೇನಾ ಸಂಘಟನೆಯ ಸಂಯುಕ್ತಾಶ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಸ್ವಾಭಿಮಾನಿ ಪ.ಜಾ/ಪ.ಪಂಗಡದ ಪ್ರಮುಖರು,ಪ್ರಗತಿಪರರು,ಹಿಂದುಳಿದವರ್ಗ /ಅಲ್ಪ ಸಂಖ್ಯಾತ ಸಮಾಜದ ಪ್ರಮುಖರು ಭಾಗವಹಿಸುವ ಮೂಲಕ ಹಿರಿಯ ನಾಯಕ ಆಯುಷ್ಮಾನ ಪಿತಾಂಬ್ರಪ್ಪ ಬಿಳಾರ ರವರ ಹುಟ್ಟು ಹಬ್ಬವನ್ನು ಸಹ ಆಚರಿಸಲಾಯಿತು.
ಧಾರವಾಡದ ಲಕ್ಷ್ಮಣ ಬಕ್ಕಾಯಿ, ಸಮತಾ ಸೈನಿಕ ದಳದ ಶಂಕರ ಅಜಮನಿ,
1) ಸಮತಾಸೇನಾ ವಿವಿಧ ದಲಿತ ಸಂಘ-ಸಂಸ್ಥೆಗಳ ಮಹಾಮಂಡಳ(ರಿ) ,
2) ಸಮಗಾರ ಹರಳಯ್ಯ ಸಮಾಜ ಅಭಿವೃದ್ದಿ ಮಹಾಮಂಡಳ (ರಿ)ಯ ಗುರುನಾಥ -ಉಳ್ಳಿಕಾಶಿ,
ಮಲ್ಲಿಕಾರ್ಜುನ ಬಿಳಾರ,ಗಂಗಾಧರ ಪೆರೂರ,
3) ಲಿಡಕರ್ ಸಂಘಟನೆಯ ಲೋಹಿತ ಗಾಮನಗಟ್ಟಿ, ಹಾಶ್ಯಂ ಮುಲ್ಲಾ,ದೇವಣ್ಣ ಇಟಗಿ,ಕಿರಣ ಗಾಮನಗಟ್ಟಿ,ಲಕ್ಷ್ಮಣ ಮಂಚಲಾಪುರ,ಮಂಜುಳಾ ಬೆಣಗಿ,ಇಝಾಜ ಉಪ್ಪಿನ,ಬಾಷಾ ಮಾಸನೂರ,ರೈಸ ಖೋಜೆ,ರವಿ ಹನುಮಸಾಗರ,ಗುರು ಕ್ವಾಟಿ,ಗಂಗಾಧರ ಗಬ್ಬೂರ,ಮಹಿಳಾ ಪ್ರಮುಖರಾದ ನಿರ್ಮಲಾ ಮಾನೆ,ಮಂಜುಳಾ ಬೆಣಗಿ,
ಲಿಡಕರ ಚರ್ಮಕುಟೀರಕಾರರು ಮತ್ತು ಪ್ರಗತಿಪರ,ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.
![](http://powercity.news/wp-content/uploads/2022/01/IMG-20220101-WA0115.jpg)
ಈ ಸಂಧರ್ಭದಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ ಮತ್ತು ವಿವರ ವನ್ನ ಸಂವಿಧಾನ ಶಿಲ್ಪಿ ಹೇಗೆ ” *ಬ್ಯಾಟಲ್ ಆಫ ಕೊರೆಗಾಂವ್”* ರಚಿಸುವ ಮೂಲಕ ವಿಶ್ವಕ್ಕೆ ತಿಳಿಸಿದ ಕುರಿತು ಲಕ್ಷಣ ಬಕ್ಕಾಯಿ ವಿವರವಾಗಿ ಮಾತನಾಡಿದರು.
*ಶಂಕರ ಅಜಮನಿ* (ಸಮತಾ ಸೈನಿಕ ದಳ)ದ ರವರು ಮಾತನಾಡಿ ಆರ್ಯರ ದೇಶವಿದಲ್ಲ ನಾವು ಈ ದೇಶದ ಮೂಲ ನಿವಾಸಿಗಳಾಗಿದ್ದು ನಮ್ಮ ಮೇಲೆ ಮತಾಂತರ ಹಾಗೂ ಆಹಾರ ಪದ್ದತಿಯ ದಬ್ಬಾಳಿಕೆ ನಡೆಸಬೇಡಿ,ಅದಕ್ಕೆ ನಾವು ಬಗ್ಗಲ್ಲ,ನೀವು ಈ ದೇಶಕ್ಕೆ ವಲಸೆಬಂದವರೇ ಹೊರತು ನಾವು ನಿಮ್ಮಲ್ಲಿಗೆ ಬಂದವರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
*ರತ್ನಾಬಾಯಿ ಗಬ್ಬೂರ*
ರವರು ಮಾತನಾಡಿ ಇತಿಹಾಸವನ್ನರಿತು ನಾವೆಲ್ಲರೂ ಪ್ರತಿ ಕ್ಷೇತ್ರದಲ್ಲೂ ಶಿಕ್ಷಣ ಪಡೆದು ಮುಂದೆ ಸಾಗಬೇಕು ಎಂದರು.
*ಮಲ್ಲಿಕಾರ್ಜುನ ಬಿಳಾರ*
ಮಾತನಾಡಿ ಸದರಿ ಕಾರ್ಯಕ್ರಮದಲ್ಲಿ ಎಲ್ಲ ಸಮಾಜದ ಪ್ರಮುಕರು ಏಕತೆಯಿಂದ ಸೇರಿದ್ದು ಸಂತಸ ತಂದಿದೆ ಇದು ಬಾಬಾಸಾಹೇಬರ ಕನಸಾಗಿತ್ತು ಮತ್ತು ದಲಿತ ಪರ ನಮ್ಮ ನೆಚ್ಚಿನ ನಾಯಕ ದಿ. ಪಿತಾಂಬ್ರಪ್ಪ ಬಿಳಾರ ರವರ ಆಶಯವಾಗಿತ್ತು ಎಂದು ತಿಳಿಸಿದರು.
*ಗುರುನಾಥ ಉಳ್ಳಿಕಾಸಿ* ಕಾರ್ಯಕ್ರಮ ನಿರೂಪಿಸಿ ಮಾತನಾಡಿ ಈ ಮಹತ್ತರ ದಿನವನ್ನ ದಲಿತರು ಆಚರಿಸಿದಾಗ ಹಲವು ಮೇಲ್ವರ್ಗದವರು ಕೀಳು ಮಟ್ಟದ ಅಭಿಪ್ರಾಯ ಗಳು – ಮತಾಂತರ ದಂತಹ ಸಲ್ಲದ ವಿದ್ರೋಹದ ವಾಕ್ಯ ಗಳನ್ನೂ ಸಮಾಜದಲ್ಲಿ ಹರಿಬಿಡುವ ಮೂಲಕ ದೌರ್ಜನ್ಯ ವೆಸಗುವ ಮೆಲ್ವರ್ಗದವರು ನಡೆಸುವ ಹುನ್ನಾರ ಅನ್ಯಾಯದ ಪರಮಾವಧಿಯಾಗಿದೆ,ನಹೀಗಾಗಿ ಇ ಕೊರೆಗಾಂವ್ ವಿಜಯೋತ್ಸವ ದಿವಸ್ ವಿಶ್ವ ಮರೆಮಾಚದಂತೆ ಇತಿಹಾಸವನ್ನ ನೆನಪಿಸಿ ಸ್ವಾಭಿಮಾನವನ್ನ ಹೇಳಿಕೊಟ್ಟ ಮಹಾನಾಯಕ ಡಾ:ಬಾಬಾಸಾಹೇಬರಿಗೆ ಗೌರವ ಸಲ್ಲಿಸಲು ಈ ನೂತನ ವರ್ಷದ ಮೊದಲ ದಿನವನ್ನ ಭೀಮಾ ಕೋರೆಗಾಂವ್ ನ ವಿಜಯೋತ್ಸವ ದಿನವನ್ನಾಗಿ ಹೆಮ್ಮೆಯಿಂದ ಆಚರಿಸುತ್ತೇವೆಂದು ಸಭೆಯನ್ನುದ್ದೇಶಿಸಿ ಮಾತನಾಡಿದರು.
![](http://powercity.news/wp-content/uploads/2022/01/IMG-20220101-WA0116.jpg)
ಲೋಹಿತ ಗಾಮನಗಟ್ಟಿ ರವರು ವಂದನಾರ್ಪಣೆ ಮಾಡಿದರು.
ನಂತರ ಸಭೆಯಲ್ಲಿ
ಜೈ ಭೀಮ್ ಘೋಷಣೆಯೊಂದಿಗೆ ಮೂಲ ನಿವಾಸಿ ಜಿಂದಾಬಾದ್ ಎಂದು ವಿಜಯೋತ್ಸವ ಆಚರಿಸಿದರು.
![](https://www.powercity.news/wp-content/uploads/2022/01/IMG-20220101-WA0117-850x532.jpg)