ಸ್ಥಳೀಯ ಸುದ್ದಿ
ಕಿಟೆಲ್ ಕಾಲೇಜಗೆ ಭೇಟಿ ನೀಡಿ ಸಮಸ್ಯೆ ಆಲಿಸಿದ ಮೇಯರ್
![](https://www.powercity.news/wp-content/uploads/2022/09/IMG-20220909-WA0007.jpg)
ಧಾರವಾಡ
ಧಾರವಾಡದ ಕಿಟಲ್ ಮಹಾವಿದ್ಯಾಲಯದ ಸಿಬ್ಬಂದಿಗಳ ಕೋರಿಕೆಯ ಮೇರೆಗೆ ಇಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರು ಭೇಟಿ ನೀಡಿ ಅವರ ಸಮಸ್ಯೆಗಳಾದ ಒಳಚರಂಡಿಯಿಂದ ಶಾಲೆ ಹಾಗೂ ಉಪನ್ಯಾಸ ಕೊಠಡಿಯ ಒಳಗಡೆ ನೀರು ನುಗ್ಗುತ್ತಿರುವುದು, ಹಾಗೂ ಪಾಲಿಕೆಯ ಮುಖ್ಯ ನಾಲಾ ಅತಿಕ್ರಮಣದ ಬಗ್ಗೆ ಮಹಾಪೌರರ ಗಮನಕ್ಕೆ
ತಂದರು.
![](https://powercity.news/wp-content/uploads/2022/09/IMG-20220909-WA0009.jpg)
ಇವುಗಳ ಬಗ್ಗೆ ಗಮನ ಹರಿಸಿದ ಮಹಾಪೌರರು ಆದಷ್ಟು ಶೀಘ್ರದಲ್ಲಿ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪಾಲಿಕೆಯ ವಲಯ ಸಹಾಯಕ ಆಯುಕ್ತರಾದ ಶ್ರೀ ಆರ್.ಎಂ. ಕುಲಕರ್ಣಿ ರವರು, ಶ್ರೀ ಮನೋಜ್ ಗಿರೀಶ ರವರು, ಅಭಯಂತರರಾದ ಶ್ರೀ ರಾಜೇಶ ರವರು, ಶ್ರೀ ವಿಲ್ಸನ್ ಮೊಯಿಲಿ ರವರು, ಡಾ. ಕ್ರಿಸ್ಟೋಫರ್ ರವರು ಹಾಗೂ ಕಿಟಲ್ ಮಹಾವಿದ್ಯಾಲದ ಸಿಬ್ಬಂದಿಗಳು ಉಪಸ್ಥಿತರಿದ್ದರು.
![](https://powercity.news/wp-content/uploads/2022/09/IMG-20220909-WA0010.jpg)
![](https://powercity.news/wp-content/uploads/2022/09/IMG-20220909-WA0009-1.jpg)