ಸ್ಥಳೀಯ ಸುದ್ದಿ

ಕೇಂದ್ರ ಬಜೆಟ್ ಶ್ಲಾಘನೀಯ- ಮೇಯರ್ ಈರೇಶ ಅಂಚಟಗೇರಿ

ಧಾರವಾಡ

ಆದಾಯ ತೆರಿಗೆ ವಿನಾಯಿತಿಯನ್ನು 7 ಲಕ್ಷಕ್ಕೆ ಏರಿಸಿ ದೇಶದ ಮಧ್ಯಮ ವರ್ಗದ ಜನರ ಪರವಾಗಿ ಕೇಂದ್ರ ಸರಕಾರವು ಬಜೆಟ್ ಮಂಡನೆ ಮಾಡುವ ಮೂಲಕ ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿದೆ ಇದೊಂದು ಶ್ಲಾಘನೀಯ ಬಜೆಟ್ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಹೇಳಿದ್ರು.

ಬಜೆಟ್ ನಲ್ಲಿ ಮಂಡನೆ ಮಾಡಿದ ಕೆಲವು ಅಂಶಗಳು ಈ ರೀತಿಯಾಗಿವೆ.

  • ಸಣ್ಣ ಪ್ರಮಾಣದ ಕೈಗಾರಿಕೆಗಳ ಬಡ್ಡಿದರ 1% ತೆರಿಗೆ ಕಡಿಮೆಯಾಗುತ್ತದೆ.

*ಎಲ್ಲಾ ಎಲೆಕ್ಟ್ರಿಕಲ್‌ಗಳು ಮತ್ತು ಮೊಬೈಲ್ ಬಿಡಿಭಾಗಗಳ ಆಮದು ಕಸ್ಟಮ್ ಸುಂಕ ಕಡಿಮೆಯಾಗಿದೆ.

  • 15 ಲಕ್ಷದವರೆಗಿನ ಸಣ್ಣ ಪ್ರಮಾಣದ ಕೈಗಾರಿಕೆಗಳು ಆದಾಯ ತೆರಿಗೆಯಿಂದ ವಿನಾಯಿತಿ ಪಡೆದ ಆದಾಯವನ್ನು ಹೊಂದಿರುವುದಿಲ್ಲ.
  • ಹೊಸ ಆದಾಯ ತೆರಿಗೆ ಪುನರಾರಂಭದಲ್ಲಿ 7 ಲಕ್ಷ ರೂಪಾಯಿಗಳವರೆಗೆ ಆದಾಯ ತೆರಿಗೆ ವಿನಾಯಿತಿ ಕೊರತೆ.
  • ಕೋ-ಆಪ್ ಸೊಸೈಟಿ ಆದಾಯ ತೆರಿಗೆ ವಿನಾಯಿತಿ.

ಬಡ ಮತ್ತು ಮಧ್ಯಮ ವರ್ಗದ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಬಜೆಟ್ ಮಂಡನೆ ಮಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಯವರ ನೇತೃತ್ವದ ಕೇಂದ್ರ ಸರಕಾರಕ್ಕೆ ಹಾಗೂ ವಿತ್ತ ಸಚಿವೆ ಶ್ರೀಮತಿ ನಿರ್ಮಲ ಸೀತಾರಾಮನ್ ಅವರಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರದ ನಾಗರಿಕರ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು ಎಂದು ಮೇಯರ್ ಕೃತಜ್ಞತೆ ಸಲ್ಲಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button