ಬೆಂಗಳೂರುರಾಜಕೀಯರಾಜ್ಯಸ್ಥಳೀಯ ಸುದ್ದಿ
ಜಮಿನಿನ ವಿಚಾರ ಸಾರ್ವಜನಿಕರ ಎದುರಲ್ಲೆ ಭೀಕರ ಹಲ್ಲೆ!
![](https://www.powercity.news/wp-content/uploads/2023/01/IMG-20230124-WA0090-1.jpg)
ಹಾಡ ಹಗಲೇ ಯುವಕನ ಮೇಲೆ ಖಾರದ ಪುಡಿ ಎರಚಿ ಕುಡುಗೋಲಿನಿಂದ ಬರ್ಬರ್ ಏಟು :ದಾಳಿಕೊರನನ್ನು ಬೆನ್ನಟ್ಟಿ ಥಳಿಸಿದ ಸಾರ್ವಜನಿಕರು!
ಪವರ್ ಸಿಟಿ ನ್ಯೂಸ್: ಮಂಡ್ಯ – ಪಟ್ಟಣದಲ್ಲಿ ಹಾಡಹಗಲೇ ಕಾರದ ಪುಡಿ ಎರಚಿದ ಯುವಕನೊಬ್ಬ ಕುಡುಗೋಲನಿಂದ ವ್ಯಕ್ತಿಯೋರ್ವನ ಮೇಲೆ ಮನ ಬಂದಂತೆ ಥಳಿಸಿ ಕೊಲೆಗೆ ಯತ್ನಿಸಿದ ಘಟನೆ ಮಂಗಳವಾರ ಮಧ್ಯಾಹ್ನ ಜರುಗಿದೆ.
![](https://powercity.news/wp-content/uploads/2023/01/IMG-20230124-WA0090-1.jpg)
ಜಮೀನಿನ ವಿಚಾರವಾಗಿ ಇಂದು ಚೆನ್ನರಾಜ್ ಎಂಬಾತನ ಮೇಲೆ ನಂದನ ಎಂಬ ಯುವಕ ತಾಲೂಕು ಕಛೇರಿಯ ಆವರಣದಲ್ಲಿ ಕುಡುಗೋಲನಿಂದ ಕತ್ತು, ಬೆನ್ನು ಸೇರಿದಂತೆ ಮನ ಬಂದಂತೆ ಥಳಿಸುತ್ತಿದ್ದ. ಇದನ್ನು ಅಲ್ಲಿಯೇ ಇದ್ದ ಕೆಲ ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿ ಈ ದೃಶ್ಯವನ್ನು ಸೆರೆ ಹಿಡಿದರೆ, ಇನ್ನೂ ಕೆಲವರು ಆರೋಪಿ ನಂದನ ಎಂಬಾತನನ್ನು ಹಿಡಿದು ಥಳಿಸಿ ಹಲ್ಲೆ ತಪ್ಪಿಸಿದ್ದು, ಗಂಭೀರವಾಗಿ ಗಾಯಗೊಂಡಿರುವ ಚೆನ್ನರಾಜ್ ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
![](https://powercity.news/wp-content/uploads/2023/01/IMG-20230124-WA0092.jpg)
ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಆರೋಪಿ ನಂದನನನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಿದ್ದಾರೆ.
![](https://www.powercity.news/wp-content/uploads/2023/01/IMG-20230124-WA0090-1-850x560.jpg)