ಜೆಡಿಎಸ್ ಪಕ್ಷದಲ್ಲಿ ಗಿರೀಶ ಪೂಜಾರಗೆ ಮಹತ್ವದ ಸ್ಥಾನಮಾನ
![](https://www.powercity.news/wp-content/uploads/2023/04/IMG-20230409-WA0019.jpg)
ಧಾರವಾಡ
ಧಾರವಾಡ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಬೆಳವಣಿಗೆಗೆ ಶ್ರಮವಹಿಸಿ ದುಡಿಯುತ್ತಿರುವ ಉತ್ಸಾಹಿ ಯುವಕ ಗಿರಿಶ ಪೂಜಾರ್ ಅವರಿಗೆ ಪಕ್ಷದಲ್ಲಿ ಉತ್ತಮ ಸ್ಥಾನ ಮಾನ ಕೊಡಲಾಗಿದೆ.
![](https://powercity.news/wp-content/uploads/2023/04/IMG-20230409-WA0022.jpg)
ಜೆಡಿಎಸ್ ಪಕ್ಷ ಸಂಘಟನೆಯಲ್ಲಿ ತೊಡಗಿರುವ ಕನ್ನಡಪರ ಹೋರಾಟಗಾರ ಗಿರೀಶ್ ಪೂಜಾರ ಅವರನ್ನು ಈ ಕೂಡಲೇ ಜಾರಿಗೆ ಬರುವಂತೆ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಜನತಾದಳ (ಜಾತ್ಯತೀತ) ಪಕ್ಷದ ಜಿಲ್ಲಾ ವಕ್ತಾರನ್ನಾಗಿ ನೇಮಕ ಮಾಡಿ ಆದೇಶಿಸಲಾಗಿದೆ.
![](https://powercity.news/wp-content/uploads/2023/04/IMG-20230409-WA0020.jpg)
ಈ ಬಗ್ಗೆ ಜೆಡಿಎಸ್ ಪಕ್ಷದಿಂದ ಅಧಿಕೃತವಾಗಿ ಆದೇಶ ಪತ್ರ ನೀಡಲಾಗಿದೆ.
![](https://powercity.news/wp-content/uploads/2023/04/FB_IMG_1681051516033.jpg)
ತಾವು ಈ ಒಂದು ಗುರುತರವಾದ ಜವಾಬ್ದಾರಿ ಸ್ಥಾನವನ್ನು ಅಲಂಕರಿಸಿ ಪಕ್ಷದ ಶಿಸ್ತು ಹಾಗೂ ಸಿದ್ದಾಂತಗಳ ಅಡಿಯಲ್ಲಿ ಪಕ್ಷವನ್ನು ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲೆಯಲ್ಲಿ ಸಧೃಡವಾಗಿ ಕಟ್ಟಲು ತಾವು ಶ್ರಮಿಸುತ್ತಿರಿ ಎಂದು ನಂಬಿ ತಾವುಗಳು ಈ ಮೂಲಕ ತಕ್ಷಣದಿಂದಲೆ ಸಂಘಟನೆಯಲ್ಲಿ ತೋಡಗಿಕೊಳ್ಳುವಂತೆ ಕೋರುತ್ತೇನೆ ಎಂದು, ಜೆಡಿಎಸ್ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾಧ್ಯಕ್ಷರಾದ
ಗುರುರಾಜ ಹುಣಸಿಮರದ ಅಭಿನಂದನೆ ಸಲ್ಲಿಸಿದ್ದಾರೆ.
ಗಿರೀಶ ಪೂಜಾರ ಪಕ್ಷ ಸಂಘಟನೆಗೆ ಒತ್ತು ನೀಡುತ್ತಿದ್ದು, ಕಲಘಟಗಿ ಮತಕ್ಷೇತ್ರದ ಸೇವಾ ಕಾಂಕ್ಷಿಯಾಗಿದ್ದಾರೆ.