ಸ್ಥಳೀಯ ಸುದ್ದಿ
ದುಸ್ಥಿತಿಯಲ್ಲಿರುವ ಶೌಚಾಲಯಗಳ ಪರಿಶೀಲನೆ ಮಾಡಿದ ಮೇಯರ್
![](https://www.powercity.news/wp-content/uploads/2022/06/IMG-20220619-WA0018-1.jpg)
ಧಾರವಾಡ
ಮೇಯರ್ ಎಂದ್ರೆ ಜನಸಾಮಾನ್ಯರ ಜನಸೇವಕನೆಂದು ತೋರಿಸಿಕೊಡುತ್ತಿದ್ದಾರೆ ನಮ್ಮ ಧಾರವಾಡ ಮೇಯರ್ ಈರೇಶ ಅಂಚಟಗೇರಿ ಅವರು.
![](http://powercity.news/wp-content/uploads/2022/06/IMG-20220619-WA0019.jpg)
ಕಾಮನ್ ಮ್ಯಾನ್ ಸಿಎಂ ಎಂದೇ ಹೆಸರು ಮಾಡಿರುವ ಸಿಎಂ ಬಸವರಾಜ ಬೊಮ್ಮಾಯಿ ಮಾದರಿಯಲ್ಲೇ ಡೌನ ಟು ಅರ್ಥ ಆಗಿರುವ ಮೇಯರ್ ಅಂಚಟಗೇರಿ ಅವರು ಜನಸಾಮಾನ್ಯರ ಸಮಸ್ಯೆಗಳನ್ನು ನೋಡಿಕೊಳ್ಳಲು ವಾರ್ಡಗಳಿಗೆ ತೆರಳಿ ಪರಿಶೀಲನೆ ಮಾಡುತ್ತಿದ್ದಾರೆ.
![](http://powercity.news/wp-content/uploads/2022/06/IMG-20220619-WA0018.jpg)
ಇಂದು ಧಾರವಾಡದ 8 ನೇ ವಾರ್ಡಿನ ಹೆಬ್ಬಳ್ಳಿ ಅಗಸಿಯಲ್ಲಿರುವ ಮಹಾನಗರ ಪಾಲಿಕೆಯ ಸಾರ್ವಜನಿಕ ಶೌಚಾಲಯವನ್ನು ಮಹಾನಗರ ಪಾಲಿಕೆಯ ಮಾನ್ಯ ಮಹಾಪೌರ ಈರೇಶ ಅಂಚಟಗೇರಿ ರವರು ವೀಕ್ಷಿಸಿದರು.
![](http://powercity.news/wp-content/uploads/2022/06/IMG-20220619-WA0018-1.jpg)
ದುಸ್ಥಿತಿಯಲ್ಲಿರುವ ಈ ಶೌಚಾಲಯವನ್ನು ಶೀಘ್ರವೇ ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಸದುಪಯೋಗವಾಗುವ ರೀತಿ ಮಾಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ರು.
ಪಾಲಿಕೆಯ ಸದಸ್ಯರಾದ ಶ್ರೀ ಶಂಕರ ಶಿಳಕೆ ರವರು, ಹಾಗೂ ಶ್ರೀಮತಿ ರತ್ನಾಬಾಯಿ ನಾಝರೆ ರವರು ಕೂಡ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಮೇಯರ್ ಅವರಿಗೆ ಮನವಿ ಸಲ್ಲಿಸಿದ್ರು.