ಧಾರವಾಡ ಮೂಲದ ಅನಿವಾಸಿ ಭಾರತೀಯನ ಮೆಚ್ಚುಗೆ ಕೆಲಸ
![](https://www.powercity.news/wp-content/uploads/2023/03/IMG_20230317_133632.jpg)
ಧಾರವಾಡ
ಅಮೇರಿಕಾದ ಅನಿವಾಸಿ ಭಾರತೀಯರು, ನಮ್ಮ ಧಾರವಾಡದವರು, ಖ್ಯಾತ ಉದ್ದಿಮೆದಾರರಾದ ಆದ ಶ್ರೀ ರವಿ ಬೋಪಳಾಪುರ ರವರು, ತಮ್ಮ ಸ್ವಂತ ಖರ್ಚಿನಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಹುಬ್ಬಳ್ಳಿ ಭಾಗಕ್ಕೆ 2, ಹಾಗೂ ಧಾರವಾಡ ಭಾಗಕ್ಕೆ 1 ಅಂತಿಮ ಶವಯಾತ್ತೆಯ ವಾಹನಗಳನ್ನು ದೇಣಿಗೆ ಕೊಟ್ಟಿದ್ದಾರೆ.
![](https://powercity.news/wp-content/uploads/2023/03/IMG_20230317_133231.jpg)
ಈ ಹಿನ್ನೆಲೆಯಲ್ಲಿ, ಇಂದು ಅವರ ಸಹಯೋಗಿಗಳಾದ ಶ್ರೀ ಸಂತೋಷ ಶೆಟ್ಟಿ ರವರೊಂದಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಮಹಾನಗರ ಪಾಲಿಕೆಯ ಮಹಾಪೌರರು ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದರು.
![](https://powercity.news/wp-content/uploads/2023/03/IMG-20230317-WA0016.jpg)
![](https://powercity.news/wp-content/uploads/2023/03/IMG_20230317_133153.jpg)
ಈಗಾಗಲೇ ಟಾಟಾ ಕಂಪನಿಯ ಅಭಿಯಂತರರೊಂದಿಗೆ ಚರ್ಚಿಸಿ, ಅವಳಿನಗರದ ನಾಗರಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಎಲ್ಲಾ ಮೂಲಭೂತ ಸೌಕರ್ಯಗಳುಳ್ಳ ಶವ ವಾಹನಗಳನ್ನು ತಯಾರಿಸುವ ಬಗ್ಗೆ ಮಹಾಪೌರರು ಸೂಚನೆ ನೀಡಿದರು.
![](https://powercity.news/wp-content/uploads/2023/03/IMG_20230317_133135.jpg)
ಕೇವಲ 500 ರೂಪಾಯಿಗಳ ವೆಚ್ಚದಲ್ಲಿ ಅವಳಿನಗರದ ನಾಗರಿಕರಿಗೆ ಸೇವೆಯನ್ನು ನೀಡುವ ಶವ ವಾಹನಗಳನ್ನು ಅತೀ ಶೀಘ್ರದಲ್ಲಿ ಮಹಾನಗರ ಪಾಲಿಕೆಗೆ ನೀಡಲಾಗುವುದು.
![](https://powercity.news/wp-content/uploads/2023/03/IMG_20230317_133207.jpg)
ಅನೇಕ ವರ್ಷಗಳಿಂದ ಅವಳಿನಗರದಲ್ಲಿ ಶವಯಾತ್ರೆಗಾಗಿ ಖಾಸಗಿ ವಾಹನಗಳ ಬಳಕೆಯಾಗುತ್ತಿದ್ದು, ಸಾರ್ವಜನಿಕರಿಂದ 4000 ದಿಂದ 5000 ಗಳನ್ನು ಭರಿಸಿಕೊಳ್ಳುತ್ತಿದ್ದು, ಅನೇಕ ಬಡವರಿಗೆ ತೊಂದರೆಯಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರ ಕೋರಿಕೆಯ ಮೇರೆಗೆ ಉಚಿತ ಶವ ಯಾತ್ರೆ ವಾಹನಗಳನ್ನು ಪಾಲಿಕೆಗೆ ನೀಡಿದ ಶ್ರೀ ರವಿ ಭೋಪಳಾಪುರ ರವರಿಗೆ ಅವಳಿನಗರದ ಜನತೆಯ ಪರವಾಗಿ ಮೇಯರ್ ಈರೇಶ ಅಂಚಟಗೇರಿ ಅಭಿನಂದನೆ ಸಲ್ಲಿಸಿದ್ರು.