ಸ್ಥಳೀಯ ಸುದ್ದಿ
ನಾಮಪತ್ರ ಹಿಂಪಡೆದು ಬಿಜೆಪಿ ಅಭ್ಯರ್ಥಿಗೆ ಬೆಂಬಲ ಘೋಷಿಸಿದ ಬಸವರಾಜ ಕೊರವರ್
![](https://www.powercity.news/wp-content/uploads/2023/04/IMG-20230424-WA0009.jpg)
ಧಾರವಾಡ
ಜನಜಾಗೃತಿ ಸಂಘದ ಅಧ್ಯಕ್ಷರು ಹಾಗೂ ಧಾರವಾಡ 71 ನೇ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾದ ಬಸವರಾಜ ಕೊರವರ ಇಂದು ನಾಮಪತ್ರ ಹಿಂಪಡೆದು, ಬಿಜೆಪಿ ಅಭ್ಯರ್ಥಿಗೆ ಬೆಂಬಲ ಘೋಷಿಸಿದ್ರು.
![](https://powercity.news/wp-content/uploads/2023/04/IMG-20230424-WA0007.jpg)
ಇಂದು ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ನಡೆಸಿದ ಮಾತುಕತೆ ಫಲಪ್ರದವಾಗಿದ್ದು, ನಾಮಪತ್ರವನ್ನು ಹಿಂಪಡೆಯುವ ಬಗ್ಗೆ ಅವರ ಮನವೊಲಿಸಿದರು.
![](https://powercity.news/wp-content/uploads/2023/04/IMG-20230424-WA0006.jpg)
ಇದೇ ಸಂದರ್ಭದಲ್ಲಿ ಕೆಲ ದಿನಗಳಿಂದ ಮನಸ್ತಾಪದಿಂದ ಅಗಲಿದ ಹಳೆಯ ಸ್ನೇಹಿತರಾದ ಹಾಲಿ ಶಾಸಕ ಅಮೃತ ದೇಸಾಯಿ ಹಾಗೂ ಬಸವರಾಜ ಕೊರವರ ರವರನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಒಂದುಗೂಡಿಸಿದ್ರು.
![](https://powercity.news/wp-content/uploads/2023/04/IMG-20230424-WA0005.jpg)
ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ ರವರು ಸಹ ಉಪಸ್ಥಿತರಿದ್ದರು.
![](https://powercity.news/wp-content/uploads/2023/04/IMG-20230424-WA0008.jpg)
ಈ ಸಂದರ್ಭದಲ್ಲಿ ಹಿರಿಯರಾದ ಕಮತಿ ರವರು, ಜಯತೀರ್ಥ ಕಟ್ಟಿ ರವರು,ನಾಗರಾಜ ಕಿರಣಗಿ ರವರು, ನೀರಲಗಿ ರವರು, ಗುರುನಾಥ ಗೌಡರ ರವರು, ಉಮೇಶ ಜೋಷಿ ರವರು ಉಪಸ್ಥಿತರಿದ್ದರು.