ಸ್ಥಳೀಯ ಸುದ್ದಿ
ನಾಳೆ ಬೃಹತ್ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಕೆಗೆ ವಿನಯ ಕುಲಕರ್ಣಿ ಕುಟುಂಬ ತಯಾರಿ
![](https://www.powercity.news/wp-content/uploads/2023/04/IMG-20230419-WA0024.jpg)
ಧಾರವಾಡ
ನಾಳೆ ಮಾಜಿಸಚಿವ ವಿನಯ ಕುಲಕರ್ಣಿ ಅವರ ಗೈರು ಹಾಜರಿಯಲ್ಲಿ ಬೃಹತ್ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಲು ಕುಟುಂಬ ವರ್ಗ ಮುಂದಾಗಿದೆ. ಇದಕ್ಕಾಗಿ ಈಗಾಗಲೇ ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ ಅವರನ್ನು ಭೇಟಿ ಆಹ್ವಾನ ಮಾಡಿದ್ದಾರೆ.
![](https://powercity.news/wp-content/uploads/2023/04/IMG-20230419-WA0023.jpg)
ಇಂದು ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಜಗದೀಶ ಶೆಟ್ಟರವರನ್ನು ಅವರ ಸ್ವ ಗೃಹದಲ್ಲಿ ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿಯವರು ಭೇಟಿ ಮಾಡಿ ಹೂಗುಚ್ಚ ನೀಡಿ, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿದಕ್ಕೆ ಅಭಿನಂದಿಸಿದರು.ಅಲ್ಲದೇ ನಾಳೆ ನಾಮಪತ್ರ ಸಲ್ಲಿಕೆಗೂ ಆಗಮಿಸುವಂತೆ ಮನವಿ ಮಾಡಿದ್ರು.
![](https://powercity.news/wp-content/uploads/2023/04/IMG-20230419-WA0016.jpg)
![](https://powercity.news/wp-content/uploads/2023/04/IMG-20230419-WA0017.jpg)
ಈ ಸಂದರ್ಭದಲ್ಲಿ, ಬ್ಲಾಕ ಅಧ್ಯಕ್ಷರುಗಳಾದ ಅರವಿಂದ ಏಗನಗೌಡರ,ಈಶ್ವರ ಶಿವಳ್ಳಿ,ಹಾಗೂ ಶ್ರೀ ವಿನಯ ಕುಲಕರ್ಣಿಯವರ ಸುಪುತ್ರಿ ವೈಶಾಲಿ ಕುಲಕರ್ಣಿ,ಹೇಮಂತ ಕುಲಕರ್ಣಿ ಮಾಜಿ ಜಿಲ್ಲಾಪಂಚಾಯತಿ ಸದಸ್ಯರಾದ ಕಲ್ಲಪ್ಪ ಪುಡಕಲಕಟ್ಟಿ,ಚನಬಸಪ್ಪ ಮಟ್ಟಿ,ಅಶೋಕ ಸೂರ್ಯವಂಶಿ,ಆಸೀಫ ಸನದಿ ಮುಂತಾದವರು ಉಪಸ್ಥಿತರಿದ್ದರು.
![](https://powercity.news/wp-content/uploads/2023/04/IMG-20230419-WA0015.jpg)