ಸ್ಥಳೀಯ ಸುದ್ದಿ
ಮನೆಗಳ ಹಂಚಿಕೆ ತಾರತಮ್ಯದ ಮರು ತನಿಖೆಗೆ ಶಾಸಕ ವಿನಯ ಕುಲಕರ್ಣಿ ಸದನದಲ್ಲಿ ಒತ್ತಾಯ
![](https://www.powercity.news/wp-content/uploads/2023/07/Screenshot_20230710_144119_WhatsApp.jpg)
ಬೆಂಗಳೂರು
ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಈ ಹಿಂದೆ ಮಳೆ ಆವಾಂತರದ ಹಿನ್ನೆಲೆಯಲ್ಲಿ ಮನೆಗಳು ಬಿದ್ದಿದ್ದು, ಹಣ ಪಡೆದು ಮನೆಗಳ ಹಂಚಿಕೆ ಆಗಿದೆ ಎಂದು ಅಧಿವೇಶನದಲ್ಲಿ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಹೇಳಿದ್ರು.
![](https://powercity.news/wp-content/uploads/2023/07/Screenshot_20230710_144113_WhatsApp.jpg)
ಸದನದಲ್ಲಿ ಮಾತನಾಡಿದ ಶಾಸಕರು, ಮನೆಗಳ ಹಂಚಿಕೆಯ ವಿಷಯದಲ್ಲಿ ತಾರತಮ್ಯವಾಗಿದ್ದು ನಿಜ. ಶೇಕಡಾ 40 ರಷ್ಟು ಮಂದಿಗೆ ಇರಲು ಕ್ಷೇತ್ರದಲ್ಲಿ ಸ್ವಂತ ಜಾಗವಿಲ್ಲಾ. ಅವರಿಗೆ ವಾಸಕ್ಕೆ ಅನುಕೂಲವಾಗಲು ಜಾಗವನ್ನು ಕಲ್ಪಿಸಿಕೊಡಬೇಕು.
ಇನ್ನು ಮನೆ ಬಿದ್ದವರಿಗೆ ನಿಜವಾಗಲೂ ಇದ್ದಂತಹ ಫಲಾನುಭವಿಗಳಿಗೆ ಹಣ ಪಾವತಿಯಾಗಿಲ್ಲಾ. ಈ ಬಗ್ಗೆ ತನಿಖೆ ಆಗಬೇಕೆಂದು ಶಾಸಕ ವಿನಯ ಕುಲಕರ್ಣಿ ಸದನದಲ್ಲಿ ಒತ್ತಾಯಿಸಿದ್ರು.