ಸ್ಥಳೀಯ ಸುದ್ದಿ
ರಾಜ್ಯದ 10 ಮಂದಿ ಅಗ್ನಿಶಾಮಕದವರಿಗೆ ಕೇಂದ್ರದ ಪ್ರಶಸ್ತಿ ಪ್ರಕಟ
![](https://www.powercity.news/wp-content/uploads/2022/04/IMG_20220414_095050-1.jpg)
ಬೆಂಗಳೂರು
ಅಗ್ನಿ ಶಾಮಕ ಸೇವಾ ಸಪ್ತಾಹದ ಸಂದರ್ಭದಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯದ 10 ಮಂದಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಕೇಂದ್ರ ಸರ್ಕಾರ ಪ್ರಶಸ್ತಿ ಪ್ರಕಟ ಮಾಡಿದೆ. ಇದರಲ್ಲಿ ಹುಬ್ಬಳ್ಳಿ ನವನಗರದ ಅಮರಗೋಳದ ಅಗ್ನಿಶಾಮಕ ಠಾಣೆಯ ಉಮೇಶ ಹಿರೇಮಠ ಅವರು ಒಬ್ಬರಾಗಿದ್ದಾರೆ.
![](http://powercity.news/wp-content/uploads/2022/04/IMG_20220414_095105-1.jpg)
ನವನಗರದ ಅಗ್ನಿಶಾಮಕ ಠಾಣೆ ಸಿಬ್ಬಂದಿ ಉಮೇಶ ಹಿರೇಮಠ ಅವರಿಗೆ ಕರ್ತವ್ಯನಿಷ್ಠೆಗೆ ಸಿಕ್ಕ ಪ್ರಶಸ್ತಿ ಇದಾಗಿದೆ.
![](http://powercity.news/wp-content/uploads/2022/04/IMG-20220413-WA0020.jpg)
![](http://powercity.news/wp-content/uploads/2022/04/IMG_20220414_093338.jpg)
ಸದಾ ಕರ್ತವ್ಯವೇ ದೇವರು ಎಂದು ನಂಬಿ ಅಗ್ನಿ ಅನಾಹುತಗಳಲ್ಲಿ ಮುಂದೆ ನಿಂತು ಕೆಲಸ ಮಾಡಿರುವ ಇವರ ಸಾಧನೆಗೆ ಕೇಂದ್ರ ಸರ್ಕಾರ
Award of DG-FS Disc and Commendation Certificate ಪ್ರಕಟ ಮಾಡಿದೆ.
![](http://powercity.news/wp-content/uploads/2022/04/IMG_20220414_093237.jpg)
ಸಧ್ಯ ಪ್ರಶಸ್ತಿ ಪ್ರಧಾನ ಕೆಲವೇ ದಿನಗಳಲ್ಲಿ ನಡೆಯಲಿದ್ದು, ದಿನಾಂಕ ಇನ್ನು ನಿಗದಿ ಮಾಡಿಲ್ಲಾ.
ಅಗ್ನಿಶಾಮಕದ ಸಿಬ್ಬಂದಿಗೆ ಈ ಪ್ರಶಸ್ತಿ ಸಿಕ್ಕಿರುವುದು ನಮಗೆಲ್ಲಾ ಹೆಮ್ಮೆ ಅಂತೀದಾರೆ ನವನಗರದ ಅಗ್ನಿಶಾಮಕ ಸಿಬ್ಬಂದಿಯವರು..