ಸ್ಥಳೀಯ ಸುದ್ದಿ

ರಸ್ತೆಗಾಗಿ ಕೈ ಪಕ್ಷದಿಂದ ಪ್ರತಿಭಟನೆ

ಧಾರವಾಡ

ಓಲ್ಡ್ ಎಸ್ ಪಿ ಕಛೇರಿಯಿಂದ ಮುರುಘಾಮಠದವರೆಗೆ ಟೆಂಡರ್ ಶೋರ್ ಎಂಬ ಅಡಿಯಲ್ಲಿ ಮಾಡಿದ ಕಳಪೆ ಕಾಮಗಾರಿಯನ್ನು ಕೂಡಲೇ ಸರಿಪಡಿಸಿ ಎಂದು ಕಾಂಗ್ರೆಸ್ ನಾಯಕರು ರಸ್ತೆಗಿಳಿದು ಹೋರಾಟ ಮಾಡಿದ್ರು.
ಪ್ರತಿಭಟನೆಯಲ್ಲಿ ಕೈ ನಾಯಕರು 40% ಬಿಜೆಪಿ ಸರ್ಕಾರ ರಾಜ್ಯದಲ್ಲಿದೆ ಎಂದು, ಸಂಬಂಧಪಟ್ಟ ಶಾಸಕರ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ರು.

ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿ, ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಆಶ್ವಾಸನೆ ನೀಡಿದ ಬಳಿಕ ಹೋರಾಟವನ್ನು ಹಿಂದಕ್ಕೆ ತೆಗೆದುಕೊಳ್ಳುಲಾಯಿತು.

ಈ ಸಂದರ್ಭದಲ್ಲಿ ಮಾಜಿ ಸಚಿವರ ಆಪ್ತ ಸಹಾಯಕ ಪ್ರಶಾಂತ ಕೇಕರೆ, ಕಾಂಗ್ರೆಸ್ ಮುಖಂಡರಾದ ಅರವಿಂದ್ ಏಗನಗೌಡ್ರ, ಬಸವರಾಜ ಜಾಧವ, ಸಂತೋಷ ನೀರಲಕಟ್ಟಿ , ಪಾಲಿಕೆ ಸದಸ್ಯ ರಾಜು ಕಮತಿ, ಗೌರಮ್ಮ ಬೊಲೋಜಿ, ನವಿನ ಕದಂ, ಮೈನುದ್ದಿನ ನದಾಫ, ನಿಜಾಮ್ ರಾಹಿ, ಶಿವು ಚನ್ನಗೌಡ್ರ,
ಸುರಜ ಪುಡಕಲಕಟ್ಟಿ , ಸುರವ್ವಾ, ಮಂಜುನಾಥ ನಡಟ್ಟಿ, ಹಾಗೂ ಹಂಪಣ್ಣವರ,
ಆನಂದ ಸಿಂಗನಾಥ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button